ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಶೆಕಾವತ್ ನಾಮಪತ್ರ:ತೃಣ-ಸೇನೆ ಗೈರು
webdunia
ರಾಷ್ಟ್ರಪತಿ ಚುನಾವಣೆಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಬೈರೋನ್‌ಸಿಂಗ್ ಶೆಖಾವತ್ ಅವರು ಇಂದು ನಾಮಪತ್ರಸಲ್ಲಿಸಿದರು.

ಎನ್‌ಡಿಎ ಮಿತ್ರಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆಯ ಮುಖ್ಯಸ್ಥರ ಗೈರುಹಾಜರಾಗಿದ್ದುದು ವಿಶೇಷವಾಗಿತ್ತು. ನಿರ್ಧರಿತ ವಿಧಾನದಲ್ಲೇ ಶೆಖಾವತ್ ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಅಮನಾತುಗೊಂಡ ನಾಯಕ ಕೆ.ನಟ್ವರ್ ಸಿಂಗ್,ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್‌ ಮಿತ್ರಪಕ್ಷವಾಗಿರುವ ಫ್ಯಾಂಥರ್ಸ್ ಪಕ್ಷದ ಭೀ ಮ್ ಸಿಂಗ್ ಉಪಸ್ಥಿತರಿದ್ದರು.

ಶೆಖಾವತ್ ಅವರು ನಾಮಪತ್ರದ 2 ಕಡತಗಳನ್ನು ಸಲ್ಲಿಸಿದರು. ಈ ಮೂಲಕ ಜುಲೈ 19ರಂದು ಜರುಗಲಿರುವ ಮತದಾನದಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್‌ ಅವರಿಗೆ ನೇರ ಸ್ಪರ್ಧೆ ನೀಡಲಿದ್ದಾರೆ.

ಭೈರೋನ್ ಸಿಂಗ್ ಶೆಖಾವತ್ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಗೆಳೆಯರಿರುವುದರಿಂದ ಪ್ರತಿಭಾ ಪಾಟೀಲ್ ಅವರಿಗೂ ಈ ಸ್ಪರ್ಧೆ ಸ್ವಲ್ಪ ಕಠಿಣವಾಗಲಿದೆ.

ನಾಮಪತ್ರ ಸಲ್ಲಿಸುವ ವೇಳೆ ಎನ್‌ಡಿಎ ನಾಯಕಿ ಸುಷ್ಮಾ ಸ್ವರಾಜ್ , ನೀಲಂ ಸಂಜೀವ ರೆಡ್ಡಿ ಉಪಸ್ಥಿತರಿದ್ದರು.

ಆದರೆ ಮರಾಠಿಗರ ಪರವಾಗಿರುವ ಶಿವಸೇನೆ ಈ ಮೊದಲೇ ಪ್ರತಿಭಾ ಪಾಟೀಲ್ ಪರ ಒಲವು ಸೂಚಿಸಿತ್ತಾದರೂ, ಇಂದು ತನ್ನ ಅಂತಿಮ ನಿಲುವು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಇಂದು ಗೈರು ಹಾಜರಾಗಿತ್ತು. ಅದೇ ರೀತಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಪ್ರಾತಿನಿಧ್ಯವೂ ಇರಲಿಲ್ಲ.
ಮತ್ತಷ್ಟು
'ರಾಷ್ಟ್ರಪತಿ ಘನತೆ'ಕಾಪಾಡಿ-ದೇವೇಗೌಡ
ಮಳೆಗೆ ಸಾವು 200- ಪ್ರಧಾನಿ ಸಮೀಕ್ಷೆ
ನಾಲ್ವರು ಹರ್ಕತ್‌ ಉಲ್ ಕುಖ್ಯಾತರ ಸೆರೆ
ಇಂದು ಶೆಖಾವತ್ ನಾಮಪತ್ರ
ಪ್ರತಿಭಾ ಪರ ಶಿವಸೇನೆ-ಎನ್‌ಡಿಎ ಗೊಂದಲ
ಮಳೆ:ರಾಜ್ಯವೂ ಸೇರಿ ಸಾವಿನ ಸಂಖ್ಯೆ 126