ಲಕ್ಷಾಂತರ ಭಕ್ತಾಧಿಗಳ ಪವಿತ್ರಯಾತ್ರಾ ಸ್ಥಳವಾದ ಅಮರನಾಥ್ಗೆ ಸಾಗುವ ಮಾರ್ಗದಲ್ಲಿ ವಿಚ್ಚಿದ್ರಕಾರಿ ಶಕ್ತಿಗಳು ಇಟ್ಟಿದ್ದ ಅನಾಹುತಕಾರಿ ಬಾಂಬ್ ಪತ್ತೆ ಹಚ್ಚಿ ಸಂಚನ್ನು ವಿಫಲಗೊಳಿಸಿದ್ದಾರೆ.
ಶ್ರೀನಗರ ಮತ್ತು ಜಮ್ಮು ಹೆದ್ದಾರಿಯಲ್ಲಿ ಅಡಗಿಸಿಟ್ಟ ಶಕ್ತಿಶಾಲಿಯಾದ ಬಾಂಬ್ನ್ನು ಪೊಲೀಸರು ಪತ್ತೆ ಹಚ್ಚಿ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ದಕ್ಷಿಣ ಕಾಶ್ಮಿರದ ಖನ್ನಾಬಾಲ್ ಪ್ರದೇಶದಲ್ಲಿರುವ ಪದವಿ ಕಾಲೇಜಿನ ಹೊರಭಾಗದಲ್ಲಿ ಅಡಗಿಸಿಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಶನಿವಾರದಿಂದ ಆರಂಭವಾಗಬೇಕಿದ್ದ ಅಮರನಾಥ್ ಯಾತ್ರೆ ಭಾರಿ ಮಳೆಯ ಕಾರಣದಿಂದಾಗಿ ರದ್ದುಗೊಳಿಸಲಾಗಿತ್ತು.
ಅಮರನಾಥ್ಗೆ ಉತ್ತರ ಕಾಶ್ಮಿರದ ಬಲತಾಲ್ ಹಾಗೂ ದಕ್ಷಿಣ ಕಾಶ್ಮಿರದ ಪಹಲ್ಗಾಮ್ನಿಂದ ತೆರಳುವ ಎರಡು ಮಾರ್ಗಗಳು ಮಳೆಯ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ.
|