ಪುರಿಯ ಪ್ರಖ್ಯಾತ ಜಗನ್ನಾಥ ಸ್ವಾಮಿ ದೇವಾಲಯದ ಶತಮಾನೋತ್ತರ ವಾರ್ಷಿಕ ರಥಯಾತ್ರೆಗೆ ಭರದ ಸಿದ್ಧತೆ ಆರಂಭವಾಗಿದೆ. ಇನ್ನೊಂದು ಕುಂಭಮೇಳದ ಪ್ರತೀತಿ ನಿರ್ಮಾಣವಾಗಿದೆ.
ವಿಶ್ವ ವಿಖ್ಯಾ ಪ್ರಸ್ತುತ ದೇವಾಲಯ ಭಯೋತ್ಪಾದಕರ ಹಿಟ್ಲಿಸ್ಟ್ನಲ್ಲಿರುವ ಸಾಧ್ಯತೆಯಿಂದ ಬಿಗು ಪಹರೆ ಈಗಾಗಲೇ ಚಾಲನೆಯಲ್ಲಿದೆ. ದೇವರ ರಥಯಾತ್ರೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ.
ರಥಯಾತ್ರೆಗೆ ಪೂರ್ವಭಾವಿಯಾಗಿ ಕಳೆದದಿನ ಅಣಕು ಕಾರ್ಯಕ್ರಮಗಳು, ಪಹರೆ ಭದ್ರತೆಗಳನ್ನು ನಡೆಸಲಾಯಿತು. ಪ್ರಸ್ತುತ ಜಗನ್ನಾಥ ದೇವರ 130ನೇ ವಾರ್ಷಿಕ ರಥಯಾತ್ರೆಗೆ ಜಗತ್ತಿನಾದ್ಯಂತದ ಭಕ್ತರು ಸೇರಲಿದ್ದಾರೆ. ದೇವರ ದರ್ಶನ ಭಾಗ್ಯಪಡೆಯಲಿದ್ದಾರೆ.
|