ದೇರಾ ಗುರು ಬಾಬಾ ಗುರ್ಮಿತ್ ಸಿಂಗ್ ರಾಂ ರಹೀಂ ಸಿಂಗ್ ಅವರನ್ನು ಬಂಧಿಸಬೇಕೆನ್ನುವ ಸಿಖ್ರು ಹಾಗೂ ದೇರಾ ಗುರುವಿನ ಬೆಂಬಲಿಗರ ನಡುವೆ ಸೋಮವಾರ ಮತ್ತೆ ಘರ್ಷಣೆ ಸಂಭವಿಸಿದೆ.
ಸಿರ್ಸಾಗೆ ಸಮೀಪ ಘೂಕಮನ್ ವಾಲಿ ಎಂಬಲ್ಲಿ ಘರ್ಷಣೆ ಸಂಭವಿಸಿದ್ದು , ಸಿಖ್ ಕಾರ್ಯಕರ್ತರು ಹಾಗೂ ಡೇರಾ ಮುಖಂಡರ ನಡುವೆ ಕಲ್ಲು ತೂರಾಟ, ಹೊಯ್ಕೈ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಸಿಖ್ ಬಣಗಳ ಘರ್ಷಣೆ ನಿವಾರಿಸಲು ಪೊಲೀಸರು, ಹಾಗೂ ಕ್ಷಿಪ್ರ ಕಾರ್ಯಪಡೆ ರಂಗ ಪ್ರವೇಶ ಮಾಡಿದೆ . ಪ್ರದೇಶದಲ್ಲಿ ಬಿಗು ಪಹರೆ ವಿನ್ಯಾಸಗೊಳಿಸಲಾಗಿದೆ.
ಸಿಖ್ ಧರ್ಮಗುರುವಿನ ಜಾಹೀರಾತು ಪ್ರಕಟಿಸಿ ದೇರಾ ಗುರು ಅವಮಾನ ಮಾಡಿದರೆಂಬ ಪ್ರಕರಣ ಕಳೆದ ತಿಂಗಳ ಭಾರೀ ರಕ್ತಪಾತಕ್ಕೆ ಕಾರಣವಾಗಿತ್ತು. ಬಳಿಕ ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣದಲ್ಲಿ ದೇರಾ ಗುರುವಿನ ಬಂಧನಕ್ಕೆ ಆದೇಶವಿದ್ದರೂ, ಅವರು ಜಾಮೀನು ರಕ್ಷಣೆ ಪಡೆದಿದ್ದರು. ಈ ನಡುವೆ, ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದೆ.
|