ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಪರ ಅಡ್ಡಮತದಾನ ಮಾಡಿದ ಐದು ಮಂದಿ ಗುಜರಾತ್ ರಾಜ್ಯದ ಶಾಸಕರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಅಮಾನತಿನಲ್ಲಿರಿಸಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಯವರ ಪ್ರಮುಖ ಟೀಕಾಕಾರರೂ ಆಗಿರುವ ಈ 5 ಮಂದಿ ಶಾಸಕರು, ಇತ್ತೀಚಿನ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಬೆಂಬಲಿತ ಅಭ್ಯರ್ಥಿಯ ಪರ ಮತ ಚಲಾಯಿಸದೆ, 'ವಿಪ್'(ಸಂಘಟನಾಆದೇಶ)ಉಲ್ಲಂಘಿಸಿರುವುದಾಗಿ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ನಾಥ್ಸಿಂಗ್ ಅವರು ಇಂದು ಹೊರಡಿಸಿರುವ ಆದೇಶದಂತೆ ಅಮಾನತಿಗೊಳಗಾದ ಶಾಸಕರ ಯಾದಿಯಲ್ಲಿ ಮೋದಿ ವಿರೋಧಿ ಶಾಸಕ ಧೀರೂಬಾಯ್ ಗಜೇರ ಅವರೂ ಇರುವುದು ವಿಶೇಷ.
ಪ್ರಸ್ತುತ ಶಾಸಕರು ಬಿಜೆಪಿಯ ಶಿಸ್ತು ಉಲ್ಲಂಘಿಸಿರುವುದಕ್ಕಾಗಿ ಈ ಅಮಾನತು ಕ್ರಮ ಎಂದು ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ತನ್ಮಧ್ಯೆ ಸಂಭಾವ್ಯ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್ ಬಿಜೆಪಿಯನ್ನು ಬಲ ಪಡಿಸಲು ಅರುಣ್ ಜೇಟ್ಲಿಯವರಿಗೆ ಉಸ್ತುವಾರಿ ನೀಡಲಾಗಿದೆ.
|