ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರಿಯಾಂಕಾ ಚೋಪ್ರ ದೋಷಮುಕ್ತಿ
ಮಧ್ಯಪ್ರದೇಶದ ಅಂದಿನ ಸಚಿವ ಪ್ರಕಾಶ್ ಜಾಜೂಗೆ ಜೀವಬೆದರಿಕೆಯೋಡ್ಡಿದ ಪ್ರಕರಣದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ತಂದೆ ಅಶೋಕ್ ಚೋಪ್ರಾ ಇವರನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.

ಮಧ್ಯಪ್ರದೇಶದ ಉಚ್ಛನ್ಯಾಯಾಲಯದ ಇಂದೋರ್‌ನ ಪೀಠವು ಪ್ರಸ್ತುತ ತೀರ್ಪು ನೀಡಿದೆ. ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಬಾಲಿವುಡ್ ತಾರೆ ಹಾಗೂ ತಂದೆ ಇಬ್ಬರನ್ನೂ ಆರೋಪಿಗಳನ್ನಾಗಿಸಿ ಸಚಿವ ಪ್ರಕಾಶ್ ಜಾಜೂ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಪ್ರಸ್ತುತ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ತಂದೆ ಹಾಗೂ ಮಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಿಯಾಂಕ ರಾಜ್ಯ ಉಚ್ಛನ್ಯಾಯಾಲಯದ ಮೊರೆಹೊಕ್ಕಿದ್ದರು.

ಪ್ರಕರಣವನ್ನು ವಿಚಾರಿಸಿದ ನ್ಯಾಯಾಧೀಶ ಎಸ್ ಸಿ ವ್ಯಾಸ್ ಅವರು ಪ್ರಿಯಾಂಕಾ ಚೋಪ್ರಾ ಹಾಗೂ ಇವರ ತಂದೆಯ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ದೋಷಮುಕ್ತಿಗೊಳಿಸಿದ್ದಾರೆ.
ಮತ್ತಷ್ಟು
ಅಡ್ವಾಣಿ ಹತ್ಯಾಸಂಚು:ಆ.6 ತೀರ್ಪು ನಿರೀಕ್ಷೆ
ಆಯೋಧ್ಯಾಗಲಭೆ:ವಿವರಣೆ ಕೇಳಿದ ಸು.ಕೋರ್ಟ್
ಮೂರು ರಾಜ್ಯಗಳಲ್ಲಿ ನೆರೆಹಾವಳಿ:15 ಸಾವು
ಇಂದಿರಾ ಹತ್ಯಾಘರ್ಷಣೆ:ಹಣಅಪವ್ಯಯಕ್ಕೆ ಕಠಿಣಸಜೆ
ಅಡ್ವಾಣಿ ಹತ್ಯಾಸಂಚು:ಮದನಿ ದೋಷಮುಕ್ತಿ
ಅಡ್ವಾನಿ ಹತ್ಯೆ ಸಂಚು:ಇಂದು ಮದನಿ ತೀರ್ಪು