ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸೋನಿಯಾ ಬೆನಜೀರ್ ಮಾತುಕತೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸ್ವದೇಶಕ್ಕೆ ಮರಳಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಪರಸ್ಪರ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಸೋನಿಯಾ ಗಾಂಧಿಯವರು ಬೆನಜೀರ್ ಭುಟ್ಟೊ ಅವರ ರಾಲಿಯ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಆಘಾತ ವ್ಯಕ್ತಪಡಿಸಿದ್ದಾರೆ

ರಾಲಿಯ ಸಮಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಿಗೆ ಮುಗ್ದ ನಾಗರಿಕರು ಬಲಿಯಾಗಿರುವುದಕ್ಕೆ ಸೋನಿಯಾ ಗಾಂಧಿ ಅವರು ತಮ್ಮ ವಿಷಾಧ ವ್ಯಕ್ತಪಡಿಸಿದ್ದಾರೆ ಎಂದು ಎಐಸಿಸಿಯ ಮಾಧ್ಯಮ ವಿಭಾಗದ ಚೇರಮನ್ ಎಂ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ನೀಡಿರುವ ಹೇಳಿಕೆಯಲ್ಲಿ ಭುಟ್ಟೊ ಮತ್ತವರ ಕುಟುಂಬ ದಾಳಿಯಿಂದ ಬಚಾವ್ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ. ದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ಹೇಳಿದ್ದಾರೆ.

ಆತಂಕವಾದಿ ಶಕ್ತಿಗಳು ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಅವುಗಳನ್ನು ಹತ್ತಿಕ್ಕಬೇಕಾದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಒಂದಾಗ ಬೇಕು ಎಂದು ಅವರು ಕರೆ ನೀಡಿದ್ದಾರೆ.
ಮತ್ತಷ್ಟು
ಮಾನವ ಕಳ್ಳಸಾಗಣೆ 25 ಜನರ ಬಂಧನ
ಮುಂಬೈ ಸ್ಫೋಟ :ಸಂಜಯ್ ಟಾಡಾ ನ್ಯಾಯಾಲಯಕ್ಕೆ
ನೈತಿಕ ಹಕ್ಕು ಮಾತಿಗೆ ಬಿಜೆಪಿ ಅನರ್ಹ
ಸೇಡು ತೀರಿಸಿಕೊಳ್ಳುತ್ತಿರುವ ಆನೆಗಳು
ರಷ್ಯದ ಉಪಪ್ರಧಾನಿ ಜತೆ ಆಂಟೊನಿ ಮಾತುಕತೆ
ಕರಾಚಿ ದಾಳಿ:ಬಿಜೆಪಿಗೆ ಆಘಾತ