ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಲೋಕಸಭೆ ಸ್ಥಾನಕ್ಕೆ ಮಮತಾ ರಾಜೀನಾಮೆ
ನಂದಿಗ್ರಾಮದಲ್ಲಿ ಹಿಂಸಾಚಾರವನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರ ಲೋಕಸಭೆಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ ಅವರು, ಸಿಪಿಎಂನ ಏಕಪಕ್ಷೀಯ ಆಡಳಿತ ಮತ್ತು ಆಕ್ರಮಣಕಾರಿ ಧೋರಣೆ ಅಡಿಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಯಾರಿಗೆ ಕಳಿಸಿದ್ದಾರೆಂಬುದನ್ನು ಅವರು ಬಾಯಿಬಿಡಲಿಲ್ಲ.

ರಾಜ್ಯದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಜನಜೀವನವನ್ನು ಸ್ಥಗಿತಗೊಳಿಸುವ ತಮ್ಮ ಪಕ್ಷದ ಯೋಜನೆಯನ್ನು ಅವರು ಬಿಚ್ಚಿಟ್ಟರು. ನಂದಿಗ್ರಾಮವನ್ನು ಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ಸಿಪಿಎಂ ಯೋಜಿತ ರೀತಿಯಲ್ಲಿ ಹಿಂಸಾಚಾರಕ್ಕಿಳಿದಿದೆ ಎಂದು ಅವರು ನುಡಿದರು.
ಮತ್ತಷ್ಟು
ನೆರೆಯ ದೇಶದ ಬಗ್ಗೆ ಸೂಕ್ಷ್ಮ ಗಮನ:ಆಂಟೋನಿ
ಅಮರಾವತಿ ರೈತರ ಪಾಲಿಗೆ ನಿರಾಸೆಯ ದೀಪಾವಳಿ
ಮೇಧಾ ಪಾಟ್ಕರ್ ಉಪವಾಸ ನಿರಶನ
ನಂದಿಗ್ರಾಮ ಮರುವಶ ಅಕ್ರಮ:ರಾಜ್ಯಪಾಲರ ಟೀಕೆ
ಮೆಕ್ಕಾ ಸ್ಫೋಟ:ಮಹಿಳೆ ಬಂಧನ
ಸಿಕ್ಕಿಬಿದ್ದ ಕಳ್ಳ ಪ್ರೊಫೆಸರ್ ದಂಪತಿ