ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತೆಲಗಿ ವಿರುದ್ಧ ನರಹತ್ಯೆ ಆರೋಪ
ಬಹುಕೋಟಿ ರೂ. ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಹತ್ಯೆ ಪ್ರಕರಣವೊಂದರಲ್ಲಿ ತಪ್ಪಿತಸ್ಥನೆಂದು ತಿಳಿದುಬಂದಿದೆ. ಮುಖ್ಯಆರೋಪಿ ತೆಲಗಿ ಮತ್ತು ಇನ್ನೂ 7 ಮಂದಿ 2001ರ ಆಗಸ್ಟ್‌ನಲ್ಲಿ ಭಟ್ಟಿ ಎಂಬ ಚಾಲಕನನ್ನು ಹತ್ಯೆಮಾಡಿದ್ದಾರೆಂದು ಆರೋಪಿಸಲಾಗಿದೆ.

ತಮಿಳುನಾಡಿನಲ್ಲಿ ಭಟ್ಟಿಯು ತೆಲಗಿಯ ನಕಲಿ ಛಾಪಾಕಾಗದ ಹಗರಣವನ್ನು ನಿಭಾಯಿಸುತ್ತಿದ್ದನೆಂದು ಹೇಳಲಾಗಿದ್ದು, ತೆಲಗಿಯಿಂದ 2.5 ಲಕ್ಷ ರೂ,ಗಳನ್ನು ಕದಿಯಲು ಯತ್ನಿಸಿದ್ದರಿಂದ ತೆಲಗಿ ಮತ್ತು ಸಂಗಡಿಗರಿಂದ ಹತ್ಯೆಗೀಡಾಗಿದ್ದಾನೆಂದು ತಿಳಿದುಬಂದಿದೆ.

ತೆಲಗಿ ಸೇರಿದಂತೆ ಐವರ ವಿರುದ್ಧ ಕೊಲೆಗೆ ಸಮಾನವಲ್ಲದ ನರಹತ್ಯೆಯ ಆರೋಪ ಹೊರಿಸಲಾಗಿದ್ದರೆ ಇನ್ನುಳಿದ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ಕೋರ್ಟ್ ಶುಕ್ರವಾರ ತನ್ನ ತೀರ್ಪುಗಳನ್ನು ಪ್ರಕಟಿಸಲಿದೆ.
ಮತ್ತಷ್ಟು
ಕಾಂಗ್ರೆಸ್‌ಗೆ ವಾಮಪಕ್ಷಗಳ ಶರಣು:ಬಿಜೆಪಿ
ವ್ಯಾಪಕ ಹಿಂಸಾಚಾರ:ಅಸ್ಸಾಂಗೆ ಮೊಯ್ಲಿ
ಜಗದೀಶ್ ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್
ಏಮ್ಸ್ ಸಂಸ್ಥೆಯ ವೈದ್ಯರ ಮುಷ್ಕರ
ತಮಿಳುನಾಡಿನಲ್ಲಿ ಮಹಿಳಾ ಕಮಾಂಡೊ
ಚಿರತೆಯ ಕಣ್ಣಾಮುಚ್ಚಾಲೆ ಆಟ