ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಸಣ ಸೇರಿದ ಮದುವೆ ದಿಬ್ಬಣ
ಹಿಮಾಚಲ್ ಪ್ರದೇಶದ ಸಿಮ್ಲಾ ಜಿಲ್ಲೆಯ ರಾಂಪೂರ್ ಉಪವಿಭಾಗದಲ್ಲಿ ಮದುವೆ ದಿಬ್ಬಣದ ಗಾಡಿ ಆಳವಾದ ಕಮರಿಯೊಂದಕ್ಕೆ ಬಿದ್ದ ಪರಿಣಾಮ 8ಮಹಿಳೆಯರು ಸೇರಿದಂತೆ ಒಟ್ಟು 16 ಜನರು ಸಾವಿಗೀಡಾದ ದಾರುಣ ಘಟನೆ ಭಾನುವಾರ ನಸುಕಿನ ಜಾವ ಜರುಗಿದೆ.

ಈ ಮದುವೆ ದಿಬ್ಬಣದ ಗಾಡಿ ಪಕ್ಕದ ಕುಲ್ಲು ಜಿಲ್ಲೆಯ ದಂಕಾಪತ್ ಎಂಬಲ್ಲಿಂದ ರಾಂಪೂರ್ ಸಮೀಪದ ಕಿಂಗಲ್ ಎಂಬಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 300 ಮೀಟರ್ ಆಳವಾದ ಕಣವಿಗೆ ಬಿದ್ದ ಪರಿಣಾಮ ಗಾಡಿಯಲ್ಲಿದ್ದ 16 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ರಾಂಪೂರ್ ತಹಶೀಲ್ದಾರ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಅದೃಷ್ಟಾವಶಾತ್ 12 ವರ್ಷದ ಬಾಲಕನೊರ್ವ ಬದುಕಿ ಉಳಿದಿದ್ದು, ಚಿಕಿತ್ಸೆಗಾಗಿ ರಾಂಪೂರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಘಡದಲ್ಲಿ ಸಾವಿಗೀಡಾದ ಪ್ರತಿಯೊಂದು ಕುಟುಂಬದ ಸಂಬಂಧಿಕರಿಗೆ ಜಿಲ್ಲಾಡಳಿತ ತಲಾ 6 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು
2 ವರ್ಷದಲ್ಲಿ 7000 ಯೋಧರ ರಾಜೀನಾಮೆ
ಮಹಿಳಾ ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆ
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ