PTI ನೀವು ಸರ್ಕಾರಕ್ಕೆ ಪರವಾಗಿ ಇದ್ದರೆ ಸುರಕ್ಷಿತವಾಗಿರುತ್ತೀರಿ, ಸರ್ಕಾರಕ್ಕೆ ವಿರೋಧವಾಗಿದ್ದರೆ ದೇವರೇ ನಿಮ್ಮನ್ನು ಕಾಪಾಡಬೇಕು ಎಂದು ಪ್ರಧಾನಿ ಮನಮೋಹನ ಸಿಂಗ್ ಗುಜರಾತಿನಲ್ಲಿ ಹಬ್ಬಿರುವ ಭೀತಿಯ ವಾತಾವರಣ ಉಲ್ಲೇಖಿಸಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮದೇ ಧಾಟಿಯಲ್ಲಿ ಟೀಕಿಸಿದರು.ರಾಜ್ಯದಲ್ಲಿ ಮೂಡಿರುವ ಭಯಭೀತಿಯ ವಾತಾವರಣ ಇಡೀ ರಾಷ್ಟ್ರಕ್ಕೆ ಅಪಾಯಕಾರಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಸಿಂಗ್ ಶುಕ್ರವಾರ ನುಡಿದರು. ಮಹಾತ್ಮ ಹುಟ್ಟಿದ ನಾಡಿನಲ್ಲಿ, ಹಿಂಸಾಚಾರದಲ್ಲಿ ನಂಬಿಕೆಯಿರುವ ಜನರು ಪುನಃ ಅಧಿಕಾರ