ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಷ್ಮಣರೇಖೆ ದಾಟದಂತೆ ಕೆಳಕೋರ್ಟ್‌ಗಳಿಗೆ ಎಚ್ಚರಿಕೆ
PTI
ಕೆಳ ಕೋರ್ಟ್‌ಗಳನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಲಕ್ಷ್ಮಣರೇಖೆಯನ್ನು ದಾಟದಂತೆ ಎಚ್ಚರಿಸಿದೆ. ಕೆಳಕೋರ್ಟ್‌ಗಳು ಕಾನೂನನ್ನು ನಿರ್ಮಿಸಬಾರದು, ಬದಲಿಗೆ ಕಾನೂನನ್ನು ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹಿತವಚನ ನುಡಿದಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಕೂಡ ಮಾತನಾಡಿದ ಕೋರ್ಟ್ ಪಿಐಎಲ್‌ಗಳಿಂದ ಸಮಯ ವ್ಯರ್ಥ ಎಂದು ಬಣ್ಣಿಸಿದೆ.

ಪಿಐಎಲ್‌ಗಳು ಹಣ ಮಾಡುವುದಕ್ಕೆ ಮಾತ್ರ ಅಸ್ತ್ರವಾಗಿದೆ ಎಂದು ಹೇಳಿದೆ. ನ್ಯಾಯಾಂಗ ಸಂಯಮವನ್ನು ಪ್ರದರ್ಶಿಸುವ ಅಗತ್ಯ ಈಗ ಉಂಟಾಗಿದ್ದು, ಶಾಸಕಾಂಗದ ಸೀಮೆಯೊಳಗೆ ನ್ಯಾಯಾಂಗ ಪ್ರವೇಶ ಮಾಡಬಾರದೆಂದು ಹೇಳಿದೆ. ಪಂಜಾಬ್ ಸರ್ಕಾರ ವಜಾ ಮಾಡಿದ ಟ್ರಾಕ್ಟರ್ ಚಾಲಕನ ಪ್ರಕರಣವನ್ನು ವಿಚಾರಣೆ ನಡೆಸುವಾಗ ಕೋರ್ಟ್ ಮೇಲಿನ ಕಟುವಾದ ಆದೇಶ ನೀಡಿದೆ.

ಚಾಲಕನನ್ನು ವಜಾ ಮಾಡಿದ ಬಳಿಕ ಅವನ ಸ್ಥಾನದಲ್ಲಿ ಇನ್ನೊಬ್ಬರು ನೇಮಕವಾಗಿರುವುದರಿಂದ ಅವರಿಗೆ ಹೊಸ ಹುದ್ದೆಯನ್ನು ಸೃಷ್ಟಿಸಿ ಮರುನೇಮಕ ಮಾಡಿಕೊಳ್ಳಬೇಕೆಂದು ಪಂಜಾಬ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ಕಾನೂನುಗಳನ್ನು ಸೃಷ್ಟಿಸುವುದು ಕೋರ್ಟ್ ಕೆಲಸವಲ್ಲ. ಬದಲಿಗೆ ಅವುಗಳನ್ನು ಜಾರಿಗೆ ತರುವುದು ಅದರ ಕೆಲಸ ಎಂದು ತಿಳಿಸಿತು.

ನರ್ಸರಿ ಪ್ರವೇಶದ ಬಗ್ಗೆ ದೆಹಲಿ ಹೈಕೋರ್ಟ್ ಆದೇಶಗಳು, ರಾಜಧಾನಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಮತ್ತು ನಗರದಲ್ಲಿ ಸ್ಪೀಡ್‌ಬ್ರೇಕರ್ ತೆಗೆಯುವುದು ಮುಂತಾದ ಇತ್ತೀಚಿನ ಕೆಲವು ಕೋರ್ಟ್ ತೀರ್ಪುಗಳಿಗೆ ಕೂಡ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿತು. ನರ್ಸರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಸೇರಿಸುತ್ತಾರೆಂದು ತಪಾಸಣೆ ಮಾಡುವುದು ಕೋರ್ಟ್ ಜವಾಬ್ದಾರಿಯಲ್ಲ ಎಂದು ನುಡಿಯಿತು.

ಸುಪ್ರೀಂಕೋರ್ಟ್ ಕೆಳಕೋರ್ಟ್‌ಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಎಚ್ಚರಿಕೆ ನೀಡಿರುವುದು ಇದೇ ಪ್ರಥಮ ಬಾರಿಯಾಗಿದೆ.
ಮತ್ತಷ್ಟು
ರೈಲುಗಳ ಬಹಿಷ್ಕಾರಕ್ಕೆ ಪ್ರಯಾಣಿಕರ ನಿರ್ಧಾರ
ಮೋದಿ ವಿರುದ್ಧ ಅರ್ಜಿ ಬುಧವಾರ ವಿಚಾರಣೆ
ರೈಲು ಹಳಿತಪ್ಪಿ ಒಬ್ಬರ ಸಾವು, 70 ಜನರಿಗೆ ಗಾಯ
ಗುಜರಾತ್ ಚುನಾವಣಾ ಪ್ರಚಾರ ಅಂತ್ಯ
ಕಾರಟ್ ಬೆದರಿಕೆಗೆ ಜಗ್ಗದ ಕಾಂಗ್ರೆಸ್
ಸೊಹ್ರಾಬುದ್ದೀನ್ ಸೋದರನಿಗೆ ಬೆದರಿಕೆ ಕರೆ