ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಉತ್ತರಭಾರತದಲ್ಲಿ ಮೈಕೊರೆಯುವ ಚಳಿಯಿಂದ ಜನರು ನಡುಗುತ್ತಿದ್ದು, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಉಷ್ಣಾಂಶ ದಾಖಲಾಗಿದೆ. ಈ ಪ್ರದೇಶದಲ್ಲಿ ಐವರು ಸತ್ತಿರುವ ವರದಿಯಾಗಿದೆ. ಉತ್ತರಪ್ರದೇಶದ ಜಾನ್‌ಪುರ ಮತ್ತು ಮುಜಾಫರ್‌ನಗರ್‌ನಲ್ಲಿ ಶೀತಗಾಳಿಯಿಂದ ಮೂವರು ವ್ಯಕ್ತಿಗಳು ಸತ್ತಿದ್ದಾರೆ. ಜಮ್ಮು ಮತ್ತು ಹೋಶಿಯಾರ್‌ಪುರದ ಪಂಜಾಬ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿರುವ ವರದಿಯಾಗಿದೆ.

ಹಿಮಾಚಲಪ್ರದೇಶದ ಶಿಮ್ಲಾ ಈ ಋತುಮಾನದ ಪ್ರಥಮ ಹಿಮಪಾತಕ್ಕೆ ಸಾಕ್ಷಿಯಾಯಿತು.ಅಲ್ಲಿನ ಉಷ್ಣಾಂಶ 0.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಮುಖವಾಗಿದೆ. ಕಾಲ್ಪಾದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 4.1 ಡಿಗ್ರಿ ದಾಖಲಾಗಿದೆ.

ಜಮ್ಮು ಕಾಶ್ಮೀರದ ಎತ್ತರದ ಪ್ರದೇಶಗಲ್ಲಿ ಹಿಮಪಾತವಾಗಿದ್ದರೆ, ಕಾರ್ಗಿಲ್ ವಲಯದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 7 ಡಿಗ್ರಿಗೆ ಇಳಿದಿದೆ. ಮೌಂಟ್ ಅಬು ರಾಜಸ್ತಾನದಲ್ಲಿ ಅತೀ ಶೀತಪ್ರದೇಶವಾಗಿದ್ದು, ಅಲ್ಲಿ ಉಷ್ಣಾಂಶ 3 ಡಿಗ್ರಿಗೆ ಇಳಿದಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕನಿಷ್ಠ ಉಷ್ಣಾಂಶ 8.8 ಡಿಗ್ರಿ ದಾಖಲಾಗಿದೆ. ಆದರೆ ವಿಮಾನಗಳು ವೇಳಾಪಟ್ಟಿಯಂತೆ ಸಂಚರಿಸಿದವು.
ಮತ್ತಷ್ಟು
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ
ಆಯೋಗದ ನೋಟೀಸಿಗೆ ಕಾಂಗ್ರೆಸ್ ಇಂದು ಉತ್ತರ
ಇಂದು ಗುಜರಾತ್ ಚುನಾವಣೆ
ಚುನಾವಣೆಗೆ ಸಿದ್ಧ: ರಾಜನಾಥ್ ಸಿಂಗ್
ಕೇಂದ್ರದ ಮಲತಾಯಿ ಧೋರಣೆಗೆ ಟೀಕೆ
ಆಡ್ವಾಣಿ ಪ್ರಧಾನಮಂತ್ರಿ ಅಭ್ಯರ್ಥಿ