ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಮಪಾತ: 7 ಸೈನಿಕರು ಸೇರಿ 15 ಸಾವು
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಹಿಮಪಾತಕ್ಕೆ ಸಿಲುಕಿ ಏಳು ಮಂದಿ ಸೇನಾ ಸಿಬ್ಬಂದಿಯೂ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಬಾರಾಮುಲ್ಲ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಜೂನಿಯರ್ ಕಮಿಶನ್ಡ್ ಅಧಿಕಾರಿ ಸೇರಿದಂತೆ ಏಳು ಮಂದಿ ಸೇನಾ ಸಿಬ್ಬಂದಿ ಹಾಗೂ ಎಂಟು ಮಂದಿ ನಾಗರಿಕರು ಕಾಣೆಯಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದು, ಎಂಟು ನಾಗರಿಕರ ಕುಟುಂಬಕ್ಕೆ ಸೇನಾಪಡೆಯು ಈಗಾಗಲೇ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ. ಅವರು ಬದುಕುಳಿದಿದ್ದರೂ ಕೂಡ ಪರಿಹಾರ ವಿತರಿಸಲಾಗುತ್ತದೆ ಎಂದು ಸೇನಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಲೈಂಗಿಕ ಕಿರುಕುಳ: ವಿದೇಶಿ ಮಹಿಳೆ ದೂರು
ಹಿಂಸೆ ಮುಂದುವರಿಸಿದರೆ ಎಚ್ಚರಿಕೆ: ಮಾಯಾವತಿ
ವಾಜಪೇಯಿಗೆ ಭಾರತರತ್ನ: ಆಡ್ವಾಣಿ ಆಗ್ರಹ
ಅನ್ಸಾಲ್ ಸೋದರರ ಶಿಕ್ಷೆ ಹೆಚ್ಚಿಸಲು ಅರ್ಜಿ
ಉತ್ತರಪ್ರದೇಶದಲ್ಲಿ ಗೋಲೀಬಾರ್: ಇಬ್ಬರ ಸಾವು
ಟ್ರಕ್ ಹರಿದು ಮೂವರು ಮಕ್ಕಳ ಸಾವು