ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸರಕಾರ ಒಲವು
ಸುಪ್ರಸಿದ್ಧ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸುವ ಕುರಿತು ತಾನು ಒಲವು ಹೊಂದಿರುವುದಾಗಿ ಕೇರಳ ಸರಕಾರ ಸುಪ್ರೀಂ ಕೋರ್ಟಿಗೆ ಗುರವಾರ ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪೂಜಾ ಕೇಂದ್ರದ ಅಧಿಕಾರಿಗಳು ಇನ್ನಷ್ಟೆ ತಮ್ಮ ಉತ್ತರವನ್ನು ಸಲ್ಲಿಸಬೇಕಾಗಿದೆ. ಈ ಹಿಂದೆ ದೇವಸ್ಥಾನಂ ಮಂಡಳಿಯು, 10ರಿಂದ 50ರೊಳಗಿನ ಮಳೆಯರು ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತ್ತು.

ಕಳೆದ ವರ್ಷ ಸಿನಿಮಾ ನಟಿ ಜಯಮಾಲ ತಾನು ದೇವಾಲಯದೊಳಕ್ಕೆ ಪ್ರವೇಶಿಸಿದ್ದೆ ಎಂಬುದಾಗಿ ನೀಡಿದ್ದ ಹೇಳಿಕೆ ಅತಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದು, ನಾನಾ ತಿರುವುಗಳನ್ನ ಪಡೆದಿತ್ತು.

ಜಯಮಾಲಾರ ಹೇಳಿಕೆಯಿಂದಾಗಿ ದೇವಾಲಯದ ಅಧಿಕಾರಿಗಳು ದೇವಾಲಯದ ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸಲು ಮುಂದಾಗಿದ್ದರು.
ಮತ್ತಷ್ಟು
ಸಿಮಿ ಮೇಲಿನ ನಿಷೇಧ ವಿಸ್ತರಣೆ
ಹಸಿರು ತಂತ್ರಜ್ಞಾನ ಉತ್ತೇಜನಕ್ಕೆ ನಿಧಿ: ಪ್ರಧಾನಿ
ಅಮಿತಾಬ್ ವಿರುದ್ಧ ಆಕ್ರಮಣ ಶುದ್ಧ ಅವಿವೇಕಿತನ
ನಾನು ಸತ್ತರೆ ಕಾಂಗ್ರೆಸ‌ನ್ನು ಕ್ಷಮಿಸಬೇಡಿ : ಮಾಯಾ
ಖಾಸಗಿ ಉದ್ಯೋಗ ಮೀಸಲು ಶಾಸನ: ಮಾಯಾ ಒತ್ತಾಯ
ಪ.ಬಂಗಾಳದಲ್ಲಿ ಲಘು ಕಂಪನ