ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಅರುಣಾಚಲ ಪ್ರದೇಶ ಭಾರತದ ಅವಿಬಾಜ್ಯ ಅಂಗವೆಂಬುದಾಗಿ ನೀಡಿರುವ ಹೇಳಿಕೆಯನ್ನು ಚೀನ ಪ್ರತಿಭಟಿಸಿದೆ.
ಗಡಿವಿವಾದದ ಕುರಿತು ಉಭಯ ರಾಷ್ಟ್ರಗಳು ಮಾತುಕತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ ಎಂಬ ಸಂದೇಶವನ್ನು ಚೀನ ಭಾರತಕ್ಕೆ ರವಾನಿಸಿದೆ ಎಂಬುದಾಗಿ ಮೂಲಗಳು ಹೇಳಿವೆ.
ಅರುಣಾಚಲಕ್ಕೆ ಪ್ರಧಾನಿಯವರ ಭೇಟಿ ಹಾಗು ಅವರ ಹೇಳಿಕೆಯ ಕುರಿತು ಪ್ರತಿಭಟನೆಯನ್ನು ಅನೌಪಚಾರಿಕವಾಗಿ ಭಾರತೀಯ ರಾಯಭಾರ ಕಚೇರಿಗೆ ಚೀನ ವಿದೇಶಾಂಗ ಸಚಿವಾಲಯ ಈ ವಾರದ ಆದಿಯಲ್ಲಿ ರವಾಸಿಸಿದೆ ಎಂದು ಮೂಲಗಳು ತಿಳಿಸಿವೆ.
|