ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಷಾಹಾರ: ವೈಷ್ಣೋದೇವಿ ಯಾತ್ರಿ ಸಾವು
ವೈಷ್ಣೋದೇವಿ ಯಾತ್ರಾರ್ಥಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇವರ ಸಾವಿಗೆ ವಿಷಾಹಾರ ಸೇವನೆ ಕಾರಣ ಎಂದು ಶಂಕಿಸಲಾಗಿದೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ಪಾದಲ್ಲಿರುವ ವೈಷ್ಣೋದೇವಿ ಶಿಬಿರದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾಣೋ ದೇವಿ ಮತ್ತು ಸಂಗೀತ ಬಜಾಜ್ ಎಂಬಿಬ್ಬ ದೆಹಲಿಯ ಮಹಿಳೆಯರು ಯಾತ್ರೆ ಹೊರಟಿದ್ದು, ಇವರಲ್ಲಿ ರಾಣೋ ದೇವಿ ಸಾವನ್ನಪ್ಪಿದ್ದರೆ, ಸಂಗೀತಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಅತಿಥಿ ಗೃಹದಲ್ಲಿ ಆಹಾರ ಸೇವಿಸಿದ ಬಳಿಕ ಇವರಿಬ್ಬರು ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಜಮ್ಮುವಿನ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಂಧುಗಳು ಹಾಗೂ ಅತಿಥಿ ಗೃಹದ ಸಿಬ್ಬಂದಿಗಳನ್ನು ಪ್ರಶ್ನಿಸುತ್ತಿದ್ದಾರೆ. ಮೃತರ ದೇಹವನ್ನು ಅಂತಿಮ ಕ್ರಿಯೆಗಾಗಿ ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ.
ಮತ್ತಷ್ಟು
ಭಾರತ-ಪಾಕ್ ಗಡಿಯಲ್ಲಿ ಭಾರೀ ಕಾದಾಟ
'ಆಮ್ ಆದ್ಮಿ'ಯನ್ನು ಕಂಗೆಡಿಸಿದ ಹಣದುಬ್ಬರ ಶೇ.7.61ಕ್ಕೆ
ರಾಮಸೇತು - ಎಎಸ್ಐ ತನಿಖೆ ಪರಿಗಣಿಸಿ: ಸು.ಕೋ
ಜಮ್ಮು: ನದಿಗೆ ಬಸ್ಸು ಉರುಳಿ 20 ಮಂದಿ ಮೃತ್ಯು
ರಾಮದಾಸ್ ವಜಾಕ್ಕೆ ಬಿಜೆಪಿ ಒತ್ತಾಯ; ನಕಾರ
ರಾಮದಾಸ್‌ಗೆ ಮುಖಭಂಗ: ವೇಣುಗೋಪಾಲ್‌ಗೆ ಜಯ