ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರ್ಭಿಣಿ ಮಗಳನ್ನು ಕೊಂದು ಪ್ರದರ್ಶನಕ್ಕಿಟ್ಟ!
ಕುಟುಂಬದ ಮರ್ಯಾದೆಗಾಗಿ ಗರ್ಭಿಣಿ ಮಗಳು ಮತ್ತು ಆಕೆಯ ಪ್ರಿಯಕರನನ್ನು ಕೊಂದ ಅಪ್ಪನೊಬ್ಬ ಗ್ರಾಮಸ್ಥರ ಪ್ರಶಂಸೆಗಾಗಿ ಆ ಜೋಡಿಯ ಶವಗಳನ್ನು ಪ್ರದರ್ಶನಕ್ಕಿಟ್ಟ ಅಮಾನುಷ ಘಟನೆ ಹರ್ಯಾಣದಲ್ಲಿ ಸಂಭವಿಸಿದೆ.

ಸುನಿತಾ ಎಂಬಾಕೆ ಕರ್ನಲ್ ಗ್ರಾಮದ ಜಸ್ಬೀರ್ ಸಿಂಗ್(27) ಎಂಬಾತನ ಬಾಲ್ಯದ ಗೆಳತಿ. ಸುನಿತಾಳಿಗೆ ಬೇರೆ ವಿವಾಹವಾಗಿದ್ದರೂ, ಈ ಜೋಡಿ ರಹಸ್ಯವಾಗಿ ಪ್ರೇಮಿಸುತ್ತಿದ್ದರು. ಕಳೆದ ವರ್ಷ ಸುನಿತಾ ತನ್ನ ಪತಿಯಿಂದ ವಿಚ್ಛೇದನ ಪಡೆದು ಜಸ್ಬೀರ್‌ನೊಂದಿಗೆ ಬದುಕುತ್ತಿದ್ದಳು. ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು.

ಜಾಟ್ ಸಮುದಾಯದ ಬಾಹುಳ್ಯವುಳ್ಳ ಕರ್ನಲ್ ಗ್ರಾಮದಲ್ಲಿ ಅದೇ ಗ್ರಾಮದ ಜನತೆ ಪರಸ್ಪರ ಒಡಹುಟ್ಟಿದವರು ಎಂಬ ನಂಬುಗೆ ಇದೆ. ಸುನಿತಾ ಗರ್ಭವತಿ ಎಂದು ತಿಳಿಯುತ್ತಲೇ, ಆಕೆಯ ಕುಟುಂಬಿಕರು ಈ ಪ್ರೇಮಿಗಳನ್ನು ಬಡಿದು ಕೊಂದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಮುದಾಯ ಹಾಗೂ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ಸಹನೀಯವಲ್ಲ ಎಂಬ ಸಂದೇಶವನ್ನು ಸಾರಲು ಮತ್ತು ಗ್ರಾಮಸ್ಥರ ಪ್ರಶಂಸೆಗಾಗಿ ಇವರ ಶವಗಳನ್ನು ಮನೆಯಿಂದ ಹೊರಗೆ ಪ್ರದರ್ಶನಕ್ಕಿರಿಸಲಾಗಿದೆ.

ಸುನಿತಾಳ ಅಣ್ಣನೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಕುಟುಂಬಿಕರ ಈ ಕೃತ್ಯವನ್ನು ಸಮರ್ಥಿಸಿರುವ ಸುನಿತಾಳ ತಾಯಿ ರೋಷ್ನಿ ದೇವಿ, ಈ ಮೂಲಕ ಕುಟುಂಬದ ಮರ್ಯಾದೆ ಉಳಿಸಲಾಗಿದೆ ಎಂದು ಹೇಳಿದ್ದಾಳೆ.
ಮತ್ತಷ್ಟು
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!
ಬುದ್ಧ ಹೇಳಿಕೆ ಹುರುಳಿಲ್ಲದ್ದು: ಪಿಎಂಓ
ಮೇವು ಹಗರಣ: ಬಿಹಾರ ಸರಕಾರಕ್ಕೆ ನೋಟೀಸ್
ವಿಷಾಹಾರ: ವೈಷ್ಣೋದೇವಿ ಯಾತ್ರಿ ಸಾವು
ಭಾರತ-ಪಾಕ್ ಗಡಿಯಲ್ಲಿ ಭಾರೀ ಕಾದಾಟ