ಅತ್ತ ಎಡಪಕ್ಷಗಳು ಯುಪಿಎಗೆ ನೀಡಿರುವ ಬೆಂಬಲ ಹಿಂತೆಗೆತದ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿರುವಂತೆ, ಇತ್ತ ಸಮಾಜವಾದಿ ಪಕ್ಷವು ಸರಕಾರಕ್ಕೆ ಬೆಂಬಲ ನೀಡುವ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದೆ.
ಪಕ್ಷದ ಚಿನ್ನೆಡೆಯಡಿ ಸ್ಫರ್ಧಿಸಿರುವ ಎಲ್ಲಾ ಸಂಸದರ ಹೆಸರನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪಟ್ಟಿಯು ಒಳಗೊಂಡಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ. ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರೊಂದಿಗೆ ರಾಷ್ಟ್ರಪತಿಯವನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ ಎಲ್ಲಾ ಸದಸ್ಯರು ಸಂಸತ್ತಿನಲ್ಲಿ ಪಕ್ಷವು ಹೊರಡಿಸುವ ವಿಪ್ ಅನುಸರಿಸಲಿದ್ದಾರೆ ಎಂದು ಸಿಂಗ್ ನುಡಿದರು.
ಆದರೆ ಬೆಂಬಲ ನೀಡುವ ಸದಸ್ಯರ ನಿಖರ ಸಂಖ್ಯೆಯನ್ನು ಅವರು ತಿಳಿಸಿಲ್ಲ. ಅಮಾನತ್ತುಗೊಂಡಿರುವ ಪಕ್ಷದ ಸಂಸದ ಬೆನ್ನಿ ಪ್ರಸಾದ್ ವರ್ಮಾ ಅವರನ್ನು ಬುಧವಾರ ಬೆಳಿಗ್ಗೆ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು ಅಮಾನತ್ತುಗೊಂಡಿರುವ ಇನ್ನೊರ್ವ ಸದಸ್ಯ ಅತಿಕ್ ಅಹ್ಮದ್ ಅವರೂ ಕಾಂಗ್ರೆಸನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
|