ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಬಿಐ ಅಫಿದಾವತ್‌ಗೆ ಕೇಂದ್ರದ ಒತ್ತಡ: ಬಿಎಸ್ಪಿ  Search similar articles
PTI
ಬಿಎಸ್ಪಿ ಮುಖ್ಯಸ್ಥೆ, ಯುಪಿ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ದ ಸಿಬಿಐ ದಾಖಲಿಸಿರುವ ಅದಾಯಕ್ಕಿಂತ ಹೆಚ್ಚು ಹೊಂದಿರುವಿಕೆಯ ಪ್ರಮಾಣಪತ್ರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಎಸ್‌ಪಿ, ಇದಕ್ಕೆ ಕೇಂದ್ರದ ಒತ್ತಡ ಕಾರಣ ಎಂದು ಅಪಾದಿಸಿದೆ.

ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಮಾಜವಾದಿ ಪಕ್ಷದಿಂದ ಪಡೆದಿರುವ ಬೆಂಬಲಕ್ಕೆ ಬದಲಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರವು, ತನಿಖಾ ತಂಡದಮೇಲೆ ಒತ್ತಡ ಹೇರಿದೆ ಎಂಬುದಾಗಿ ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆಪಾದಿಸಿದೆ.

ಈ 'ಒಪ್ಪಂದ'ದ ಅಡಿಯಲ್ಲಿ ಮುಖ್ಯಮಂತ್ರಿಗಳ ವಿರುದ್ದ ಸುಳ್ಳು ಪ್ರಕರಣ ದಾಖಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಮ್ಮ ಹೇಳಿಕೆಯಲ್ಲಿ ಬಿಎಸ್‌ಪಿ ವಕ್ತಾರರನ್ನು ಉಲ್ಲೇಖಿಸಿ ಆಪಾದಿಸಲಾಗಿದೆ.

ಅಫಿದಾವತ್ ಪ್ರತಿ ಮುಖ್ಯಮಂತ್ರಿಗಳ ವಕೀಲರ ಕೈಗೆ ಸಿಗುವ ಮೊದಲೆ ಅದನ್ನು ಮಾಧ್ಯಮ ಪ್ರತಿನಿಧಿಗಳಿಗೆ ಹಂಚಿರುವ ಸಿಬಿಐನ ಕ್ರಮವನ್ನೂ ಬಿಎಸ್ಪಿ ಟೀಕಿಸಿದೆ.
ಮತ್ತಷ್ಟು
ಬಿಹಾರ: ನಕ್ಸಲರಿಂದ ರೈಲ್ವೆ ಹಳಿ, ಬಿಡಿಓ ಕಚೇರಿ ಸ್ಫೋಟ
ಹಣೆ ಚಚ್ಚಿಕೊಂಡು ಸರಕಾರದ ವಿರುದ್ಧ ಪ್ರತಿಭಟನೆ!
ವಿಶ್ವಾಸಮತ: ಯುಪಿಎಗೆ ಮುಸ್ಲಿಂ ಲೀಗ್ ಬೆಂಬಲ
ವಿಶ್ವಾಸಮತ: ಜು.22ರಂದು ಸಂಸತ್ ಕಿರು ಅಧಿವೇಶನ
ಅರುಷಿ ಕೊಲೆಗೆ ದ್ವೇಷ ಕಾರಣ: ರಾಜ್‌ಕುಮಾರ್
ಸಿಂಗ್‌ರಿಂದ ಕಾನೂನು ಉಲ್ಲಂಘನೆ: ಕಾರಟ್