ಕಾಬೂಲ್ನ ಭಾರತೀಯ ರಾಯಭಾರಿ ಕಚೇರಿ ಮೇಲೆ ಮಾಡಲಾದ ಇತ್ತೀಚಿನ ಆತ್ಮಹತ್ಯಾ ದಾಳಿಯಲ್ಲಿ ಐಎಸ್ಐ ಕೈವಾಡದ ಕುರಿತು ಗುಪ್ತಚರ ಮಾಹಿತಿ ಇರುವುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ತಿಳಿಸಿದ್ದಾರೆ.
"ಪಾಕಿಸ್ತಾನ ಭಾಗೀದಾರಿಕಾ ಸಂಸ್ಥೆಯ ಬಗ್ಗೆ ಕೇವಲ ಶಂಕೆ ವ್ಯಕ್ತಪಡಿಸುತ್ತಿಲ್ಲ, ಇದಕ್ಕೆ ಪೂರಕವಾಗಿ ಸಾಕಷ್ಟು ಗುಪ್ತಚರ ಮಾಹಿತಿಗಳಿವೆ" ಎಂದು ನಾರಾಯಣನ್ ದೂರದರ್ಶನ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇಂತದ ದಾಳಿಗಳು ಶಾಂತಿ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಐಎಸ್ಐ ಎಂದಿಗೂ ಶಾಂತಿ ಪ್ರಕ್ರಿಯೆಯ ಭಾಗವಾಗಿರಲಿಲ್ಲ. ಈ ಎರಡರ ನಡುವಿನ ವ್ಯತ್ಯಾಸ ಕಂಡುಕೊಳ್ಳುವ ಅಗತ್ಯವಿದೆ ಎಂದು ನುಡಿದರು.
|