ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತ: ಹಾಸಿಗೆ ಸಮೇತ ಸದನಕ್ಕೆ?  Search similar articles
ವಿಶ್ವಾಸಮತ ಗಳಿಸುವ ನಿಟ್ಟಿನಲ್ಲಿ ಯುಪಿಎ ಸರಕಾರವು ಜೈಲುಹಕ್ಕಿಗಳ ಬೆಂಬಲ ಯಾಚನೆ ನಡೆಸುತ್ತಿದ್ದರೆ, ಇತ್ತ ಸರಕಾರದ ವಿರುದ್ಧ ಮತ ಚಲಾವಣೆಗಾಗಿ ಬಿಜೆಪಿಯು ರೋಗಶಯ್ಯೆಯಲ್ಲಿರುವ ಸಂಸದರನ್ನು ಕರೆತರುವ ಯೋಜನೆಯನ್ನು ರೂಪಿಸಿದೆ.

ಬಿಜೆಪಿ ಸಂಸದರಾದ ಹರಿಶಂದ್ರ ಚವಾಣ್ ಅವರು ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ನಾಸಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

57ರ ಹರೆಯದ ಈ ಸಂಸದರಿಗೆ ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ನವದೆಹಲಿಯ ವರೆಗೆ ಪ್ರಯಾಣ ಕೈಗೊಳ್ಳಬಾರದು ಎಂಬುದಾಗಿ ವೈದ್ಯರು ಆದೇಶ ನೀಡಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಯು ಸರಕಾರದ ವಿರುದ್ಧ ಮತವೊಂದು ನಷ್ಟವಾಗದಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಹಾಸಿಗೆ ಹಿಡಿದಿರುವ ಸಂಸದರನ್ನು ಹಾಸಿಗೆ ಸಮೇತ ಮತಚಲಾವಣೆಗಾಗಿ ಕರೆತರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ಆದರೆ, ತಾನು ತನ್ನ ವೈದ್ಯರ ಆದೇಶವನ್ನು ಪಾಲಿಸುವುದಾಗಿ ಸಂಸದ ಚವಾಣ್ ಹೇಳಿದ್ದಾರೆ.
ಮತ್ತಷ್ಟು
ಎಂಡಿಎಂಕೆಯಿಂದಲೂ ವಿಪ್
ಎಸ್ಪಿ ಬಿರುಕು?: ಸಭೆಯಲ್ಲಿ 16 ಸಂಸದರು ಮಾತ್ರ ಹಾಜರು!
ಸರಕಾರದ ವಿರುದ್ಧ ಮತಚಲಾವಣೆಗೆ ವಾಮರಿಗೆ ವಿಪ್
ಅಪರಾಧಿ ಸಂಸದರ ಸಹಾಯ ಯಾಚನೆ: ಸಿಪಿಐ(ಎಂ) ಖಂಡನೆ
ಯುಪಿಎ ಉರುಳಿದರೆ ಎನ್‌ಡಿಎ ಸರಕಾರ ರಚಿಸದು: ಬಿಜೆಪಿ
ಪ್ರಧಾನಿ ಕಚೇರಿ ಹರಾಜು ಕೇಂದ್ರವಾಗುತ್ತಿದೆ: ಎನ್‌ಡಿಎ