ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಸಂಸದ ಶಿವಣ್ಣ ಉಚ್ಚಾಟನೆ  Search similar articles
ಸಂಸತ್‌ನಲ್ಲಿ ಮಂಗಳವಾರ ನಡೆದ ವಿಶ್ವಾಸಮತದ ಸಂದರ್ಭದಲ್ಲಿ ಯುಪಿಎ ಪರ ಮತ ಚಲಾಯಿಸಿದ ಜೆಡಿಎಸ್‌ನ ಸಂಸದ ಶಿವಣ್ಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ತಿಳಿಸಿದ್ದಾರೆ.

ಬುಧವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡಮತದ ಚಲಾವಣೆಯೇ ಶಿವಣ್ಣ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾರಣ ಎಂದು ಹೇಳಿದರು. ಪಕ್ಷದ ನಿರ್ಣಯದ ವಿರುದ್ಧವಾಗಿ ಶಿವಣ್ಣ ಅವರು ಮತ ಚಲಾಯಿಸಿದ್ದಾರೆ ಎಂದು ದೇವೇಗೌಡ ದೂರಿದರು.

ಶಿವಣ್ಣ ಅವರ ಉಚ್ಚಾಟನೆಯಿಂದಾಗಿ ಪಕ್ಷಕ್ಕೆ ಯಾವುದೇ ತೆರನಾದ ನಷ್ಟವಿಲ್ಲ, ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬುದು ತನಗೆ ತಿಳಿದಿದೆ ಎಂದರು. ಅಣು ಒಪ್ಪಂದದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೆ, ಅಲ್ಲದೇ ತಾನು ಅಣು ಒಪ್ಪಂದದ ಪರ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಮತ್ತಷ್ಟು
ಟಿವಿ ಚಾನೆಲ್ ಟೇಪನ್ನು ಯಾಕೆ ಪ್ರಸಾರ ಮಾಡಿಲ್ಲ: ಆಡ್ವಾಣಿ
ಸಿಪಿಐ(ಎಂ)ನಿಂದ ಸ್ಪೀಕರ್ ಚಟರ್ಜಿ ಉಚ್ಚಾಟನೆ
ಪ್ರಧಾನಮಂತ್ರಿಯ ಘನತೆಯೆಲ್ಲಿ?: ಬೃಂದಾ ಪ್ರಶ್ನೆ
ಅಡ್ಡಮತ 'ದಾನಿ'ಗಳನ್ನು ಕಿತ್ತೆಸೆದ ಬಿಜೆಪಿ
ಭ್ರಷ್ಟಾಚಾರದಲ್ಲಿ ಭಾರತ ಮುಂದು
ಅಡ್ಡ ಮತ 'ದಾನಿ'ಗಳಿಗೆ ಕಷ್ಟ ಕಾಲ ಆರಂಭ