ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಂಧ್ರ ರೈಲಿನಲ್ಲಿ ಬೆಂಕಿ ಆಕಸ್ಮಿಕ: 14 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರ ರೈಲಿನಲ್ಲಿ ಬೆಂಕಿ ಆಕಸ್ಮಿಕ: 14 ಸಾವು Search similar articles
ಆಂಧ್ರಪ್ರದೇಶದ ವಾರಾನಗಲ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮವಾಗಿ ಎರಡು ಮಹಿಳೆಯರು ಸೇರಿದಂತೆ 14 ಪ್ರಯಾಣಿಕರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ.

ಕ್ಸಾಮುದ್ರಂ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಗೌತಮಿ ಎಕ್ಸ್‌ಪ್ರೆಸ್‌ನಲ್ಲಿ ಸುಮಾರು ಮಧ್ಯರಾತ್ರಿಯ ಹೊತ್ತಲ್ಲಿ ಈ ಅವಗಢ ಸಂಭವಿಸಿದೆ.

ಸಿಕಂದರಾಬಾದ್-ಕಾಕಿನಾಡ್ ಗೌತಮಿ ಎಕ್ಸ್‌ಪ್ರೆಸ್‌ ಮೆಹ್ಬೂಬ್‍‌ನಗರ ಸಮೀಪದಲ್ಲಿರುವಾಗ ಸ್ಲೀಪರ್ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇದು ಇತರ ಕೋಚ್‌ಗಳಿಗೆ ಹರಡಿತು. ಈ ಬೆಂಕಿ ಆಕಸ್ಮಿಕಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲದಿದ್ದರೂ, ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಕುರಿತಾಗಿ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ವಾರಂಗಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವಾರಂಗಲ್‌ನ ಎಸ್‌ಪಿ ವಿ.ಸಿ.ಸಜ್ಜನರ್ ಹೇಳಿದ್ದಾರೆ.
ಮತ್ತಷ್ಟು
ಅಮ್ಟೆ ದಂಪತಿಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ
ಅಮರನಾಥ್ ಮಾರ್ಗದಲ್ಲಿ ಸ್ಫೋಟಕ ಪತ್ತೆ
ಕಾರಟ್ - ದೇವೇಗೌಡ ಭೇಟಿ
ಅಹಮದಾಬಾದ್ ಸ್ಫೋಟ - ಐಎಸ್‌ಐ ಕೈವಾಡ ?
ನೀರಿನಲ್ಲಿ ಮುಳುಗಿ ಇಶ್ಮಿತ್ ಸಾವು: ಮರಣೋತ್ತರ ಪರೀಕ್ಷೆ ವರದಿ
ನಾಳೆ ಸೂರ್ಯಗ್ರಹಣ: ನಾಸಾದಿಂದ ನೇರ ಪ್ರಸಾರ