ಅಮರನಾಥ್ ಭೂ ವಿವಾದ ಹಿಂಸಾಚಾರ ಭುಗಿಲೆದ್ದಿರುವ ತನ್ಮಧ್ಯೆಯೇ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಶನಿವಾರ ಜಮ್ಮುನಿನಲ್ಲಿ ಬಂಧಿಸಲಾಗಿದ್ದು, ಏತನ್ಮಧ್ಯೆ ಸಾದ್ವಿ ರಿತಂಬರಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಜಮ್ಮು ಪೊಲೀಸ್ ಮೂಲಗಳು ತಿಳಿಸಿವೆ.
ಉಮಾಭಾರತಿ ಶನಿವಾರ ಮುಂಜಾನೆ ನವದೆಹಲಿಯಿಂದ ಜಮ್ಮುವಿಗೆ ಆಗಮಿಸಿದ್ದು, ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ಉದಾಂಪುರ್ ಜಿಲ್ಲೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಫೈರ್ಬ್ರ್ಯಾಂಡ್' ಖ್ಯಾತಿಯ ಮತ್ತೊಬ್ಬ ನಾಯಕಿ ಸಾದ್ವಿ ರಿತಂಬರಿ ಅವರಿಗೆ ಜಮ್ಮುವನ್ನು ಪ್ರವೇಶಿಸಲು ಪೊಲೀಸರು ಅನುಮತಿಯನ್ನು ನಿರಾಕರಿಸಿ, ಅವರನ್ನು ಜಮ್ಮು ವಿಮಾನ ನಿಲ್ದಾಣದಿಂದ ಮರಳಿ ದೆಹಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಜಮ್ಮು-ಕಾಶ್ಮಿರದ ಪಕ್ಷದ ಉಸ್ತುವಾರಿಯನ್ನು ಹೊತ್ತಿರುವ ಅರುಣ್ ಜೇಟ್ಲಿ ಅವರು ಬಿಜೆಪಿ ಕೇಂದ್ರ ಕಚೇರಿಗೆ ತೆರಳುವ ಮುನ್ನ ಒಂದು ಗಂಟೆಗಳ ಕಾಲ ತಡೆಹಿಡಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|