ರಾಜಕೀಯ ಕೆಸರೆರೆಚಾಟ ಪಂದ್ಯದಂಗವಾಗಿ ಯುಪಿಎ ಮಿತ್ರ ಪಕ್ಷಗಳು, ಬಿಜೆಪಿಯನ್ನು ಆಪಾದಿಸಿ ಸಿಡಿ ಬಿಡುಗಡೆ ಮಾಡಿರುವ ಒಂದು ಗಂಟೆಯ ಬಳಿಕ, ಪತ್ರಿಕಾಗೋಷ್ಠಿ ಕರೆದಿರುವ ಬಿಜೆಪಿ ನಾಯಕ ಅರುಣ್ ಜೇಟ್ಲಿ, ಇದೊಂದು ಖೊಟ್ಟಿ ಸಿಡಿ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದರು ಅಮರ್ ಸಿಂಗ್ ಜತೆ ಮಾತನಾಡಿಲ್ಲ ಎಂಬ ಯುಪಿಎ ಹೇಳಿಕೆಯನ್ನು ಜೇಟ್ಲಿ ಅಲ್ಲಗಳೆದಿದ್ದಾರೆ. ಅಲ್ಲದೆ, ಇವರಿಗೆ ಹಣ ಕೊಂಡೊಯ್ದು ಒಪ್ಪಿಸಿರುವ ಸಂಜೀವ್ ಸಕ್ಸೇನಾ ಯಾರೆಂದು ಸಮಾಜವಾದಿ ಪಕ್ಷದ ನಾಯಕರಿಗೆ ತಿಳಿದಿಲ್ಲ ಎಂಬುದು ಇನ್ನೊಂದು ಸುಳ್ಳು ಎಂದಿದ್ದಾರೆ.
ಈ ಪ್ರಹಸನದಲ್ಲಿ ಅಮರ್ ಸಿಂಗ್ ಮಾತ್ರವಲ್ಲದೆ, ಕೇಂದ್ರ ಸಚಿವ ಮಂಡಳಿಯ ಒಂದು ಭಾಗವೇ ಒಳಗೊಂಡಿದೆ ಎಂದು ಜೇಟ್ಲಿ ಮತ್ತೆ ದೂರಿದ್ದಾರೆ.
|