ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ ಹಿಂಸಾಚಾರ ಖಂಡಿಸಿ ಅ.29ಕ್ಕೆ ಬಂದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ ಹಿಂಸಾಚಾರ ಖಂಡಿಸಿ ಅ.29ಕ್ಕೆ ಬಂದ್
ಒರಿಸ್ಸಾದಲ್ಲಿ ಕ್ರಿಶ್ಚಿಯನ್ ಚರ್ಚ್ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ 10 ಮಂದಿ ಸಾವಿಗೆ ಕಾರಣವಾದ ಘಟನೆಯನ್ನು ವಿರೋಧಿಸಿ ದೇಶದಾದ್ಯಂತ ಶುಕ್ರವಾರ ಕ್ರಿಶ್ಚಿಯನ್ ಸಂಸ್ಥೆಗಳನ್ನು ಮುಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಲು ಪ್ರಮುಖ ಚರ್ಚ್ ಅಡಳಿತ ಮಂಡಳಿ ನಿರ್ಧರಿಸುವುದಾಗಿ ತಿಳಿಸಿದೆ.

ಒರಿಸ್ಸಾದಲ್ಲಿ ಮುಗ್ದ ಜನತೆಯ ಮೇಲೆ ದೌರ್ಜನ್ಯ ಮುಂದುವರಿದಿರುವುದನ್ನು ವಿರೋಧಿಸಿ ದೇಶದಾದ್ಯಂತ ಕ್ರಿಶ್ಚಿಯನ್ ಅಡಳಿತ ಮಂಡಳಿಗಳ ಶಾಲಾ ಕಾಲೇಜ್‌ಗಳನ್ನು ಮುಚ್ಚಲಾಗುವುದು ಎಂದು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ವಕ್ತಾರ ಬಾಬು ಜೋಸೆಫ್ ಹೇಳಿದ್ದಾರೆ.

ಒರಿಸ್ಸಾದಲ್ಲಿ ದೌರ್ಜನ್ಯಪೀಡಿತ ಜನರಿಗೆ ಪುನರ್‌ವಸತಿಗಾಗಿ ಶೀಘ್ರದಲ್ಲಿ ಪರಿಹಾರ ನೀಡಿ ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಪ್ರಧಾನಿಯವರನ್ನು ಕೋರಲಾಗುವುದು ಎಂದು ಜೋಸೆಫ್ ತಿಳಿಸಿದ್ದಾರೆ.

ಒರಿಸ್ಸಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೋಮವಾದಿಗಳ ದೌರ್ಜನ್ಯ ಹೆಚ್ಚಾಗಿದೆ ಎಂದು ಅಖಿಲ ಭಾರತ ಕ್ರಿಶ್ಚಿಯನ್ ಕೌನ್ಸಿಲ್ ಆರೋಪಿಸಿದೆ.
ಮತ್ತಷ್ಟು
ಪುದುಚೇರಿ ಸಿಎಂ ರಂಗಸ್ವಾಮಿ ರಾಜೀನಾಮೆ
ಬಿಹಾರ ಪ್ರವಾಹ 'ರಾಷ್ಟ್ರೀಯ ವಿಕೋಪ': ಪ್ರಧಾನಿ ಘೋಷಣೆ
ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು
ಭಾರತ ಅಣುಒಪ್ಪಂದದ ಒತ್ತಡಕ್ಕೆ ಸಿಲುಕದು: ಕಾಕೋಡ್ಕರ್
ಜಮ್ಮು: ಅವಿತಿದ್ದ ಮೂರೂ ಉಗ್ರರ ಹತ್ಯೆ
ಶೀಘ್ರದಲ್ಲಿ ಭಾರತಕ್ಕೆ ಭೇಟಿ-ಪ್ರಚಂಡ