ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ
ಕಾನೂನುಬಾಹಿರವಾಗಿ ಕೃಷ್ಣಮೃಗವನ್ನು ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಧರ್ಮಾರಾವ್ ಆತ್ರಾಮ್ ಅವರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರ ಮತ್ತು ಶುಕ್ರವಾರದಂದು ಪೊಲೀಸರು ಮಾಜಿ ಸಚಿವ ಧರ್ಮಾರಾವ್ ಆತ್ರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಕುರಿತ ಹೇಳಿಕೆಯನ್ನು ಧ್ವನಿಮದ್ರಿಸಿಕೊಳ್ಳಲಾಗಿದೆ. ಆದರೆ ಮಾಜಿ ಸಚಿವರು ಅನಾರೋಗ್ಯದ ಕಾರಣ ನೀಡಿದ ಹಿನ್ನೆಲೆಯಲ್ಲಿ ಬಂಧಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೃಷ್ಣಮೃಗ ಪ್ರಕರಣದಲ್ಲಿ ಮಾಜಿ ಸಚಿವ ಆತ್ರಾಮ್ ಅಂಗರಕ್ಷಕ ಅವಿನಾಶ್ ನಾಟೇಕರ್ ಪ್ರಮುಖ ಸಾಕ್ಷಿಯಾಗಿದ್ದು, ಮಾಜಿ ಸಚಿವರ ಸಹಚರರು ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣಮೃಗದ ಮೇಲೆ ಟಾರ್ಚ್ ಲೈಟ್‌ಗಳಿಂದ ಬೆಳಕು ತೋರಿದ ನಂತರ ಮಾಜಿ ಸಚಿವ ಆತ್ರಾಮ್ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕರಾದ ಧರ್ಮಾರಾವ್ ಆತ್ರಾಮ್ ಅರಣ್ಯ ಇಲಾಖೆಯ ಮೇಲೆ ರಾಜಕೀಯ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಇಲಾಖೆ ಮೂಲಗಳು ಆರೋಪಿಸಿವೆ.
ಮತ್ತಷ್ಟು
ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
ಬಿಹಾರ: ಪರಿಹಾರಕಾರ್ಯದ ದೋಣಿ ಮುಳುಗಿ 20 ಬಲಿ
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ಜಾರ್ಖಂಡ್: ಸೊರೆನ್ ಬಹುಮತ ಸಾಬೀತು
ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್