ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್
ದೇಶದಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಲು ಕಠಿಣ ಕಾನೂನಿನ ಅಗತ್ಯ ಇರುವುದಾಗಿ ಒತ್ತಿ ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ,ಆದರೆ ಮತ್ತೆ ಫೋಟಾವನ್ನು ಮರು ಜಾರಿಗೆ ತರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ಪಂಜಾಬ್‌ ಪ್ರದೇಶದಾದ್ಯಂತ ಬುಧವಾರ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದರು.

ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಫೋಟಾದಂತಹ ಕಠಿಣ ಕಾನೂನುನನ್ನು ಜಾರಿಗೊಳಿಸುವಲ್ಲಿ ಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ ರಾಜಕೀಯವಾಗಿಯೂ ಭಯೋತ್ಪಾದನೆ ವಿರುದ್ಧ ಕಠಿಣ ಕಾಯ್ದೆಯನ್ನು ತರುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಬಲವಾದ ಇಚ್ಛೆ ಹೊಂದಿರುವುದಾಗಿ ಹೇಳಿದರು.

ಆದರೆ ಫೋಟಾ ಕಾಯ್ದೆ ಯಾಕೆ ವಿಫಲವಾಯಿತು ಎಂಬುದಾಗಿ ಗಂಭೀರವಾಗಿ ಪ್ರಶ್ನಿಸಿದ ಅವರು, ಸಂಸತ್ ಭವನದ ಮೇಲಿನ ದಾಳಿ ಮತ್ತು ಕಂಧಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಆಡಳಿತದಲ್ಲಿ ಇದ್ದವರು ಯಾರು ಎಂದು ತಿರುಗೇಟು ನೀಡಿದ್ದಾರೆ.ಅಲ್ಲದೇ ಫೋಟಾ ಕಾಯ್ದೆ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿದೆ ಎಂದರು.

ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ನೀವು ಪ್ರಧಾನಮಂತ್ರಿ ಅಭ್ಯರ್ಥಿತನದ ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಮನಮೋಹನ್ ಸಿಂಗ್ ಅವರೇ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ, ಅವರೊಬ್ಬ ಕೇವಲ ಅಭ್ಯರ್ಥಿಯಲ್ಲ, ಅವರು ವರ್ಚಸ್ವಿ ನಾಯಕರಾಗಿದ್ದಾರೆ ಎಂದು ರಾಹುಲ್ ಹೇಳಿದರು.
ಮತ್ತಷ್ಟು
ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ
ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ದೆಹಲಿ ಸ್ಫೋಟದ ಉಗ್ರರಿಗೆ ದುಬೈ ನಂಟು
ಸ್ಫೋಟ:ಉಗ್ರ ಅತಿಫ್ ಖಾತೆಯಲ್ಲಿ 3ಕೋಟಿ !
ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ
ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ