ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್
ಗ್ರೇಟರ್ ನೋಯ್ಡಾದಲ್ಲಿನ ಇಟಲಿ ಮೂಲದ ಕಂಪೆನಿಯೊಂದರ ಸಿಇಒ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಬುಧವಾರ ಕ್ಷಮಾಪಣೆ ಕೇಳಿದ್ದಾರೆ.

ನೋಯ್ಡಾದಲ್ಲಿ ಕಂಪೆನಿಯ ಮಾಜಿ ಉದ್ಯೋಗಿಗಳಿಂದಲೇ ಹತ್ಯೆಗೊಳಗಾದ ಎಲ್.ಕೆ.ಚೌಧುರಿ ಪ್ರಕರಣದ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ಕಂಪೆನಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿಕೆ ನೀಡಿದ್ದರು.

ಹತ್ಯೆ ಘಟನೆ ಕುರಿತು ಮಂಗಳವಾರ ಹೇಳಿಕೆ ನೀಡಿದ್ದ ಆಸ್ಕರ್, ಕಾರ್ಮಿಕರೊಂದಿಗಿನ ವಿವಾದ ಇತ್ಯರ್ಥಕ್ಕೆ ಕಂಪೆನಿ ಮುಂದಾಗದೇ ಇದ್ದಿದ್ದೇ ಹತ್ಯೆ ನಡೆಯಲು ಕಾರಣ,ಇಂತಹ ಘಟನೆಗಳು ಕಂಪೆನಿಗಳು ಕಾರ್ಮಿಕರಿಗೆ ಪರಿಹಾರ ಕೊಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ತಿಳಿಸಿದ್ದರು.

ಸಿಇಒ ಹತ್ಯೆಗೆ ಸಂಬಂಧಿಸಿದಂತೆ ಯಾರಿಗಾದರು ನೋವಾಗಿದ್ದರೂ ತಾನು ಕ್ಷಮಾಪಣೆ ಕೇಳುವುದಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ ಅವರು ತನ್ನದು ತಪ್ಪಾಗಿದೆ ಎಂದು ಹೇಳುವ ಮೂಲಕ ಈ ವಿವಾದವನ್ನು ಅಂತ್ಯಗೊಳಿಸಿರುವುದಾಗಿ ಹೇಳಿದರು.

ಸಚಿವ ಆಸ್ಕರ್ ಈ ಹೇಳಿಕೆಗೆ ಕಂಪೆನಿ ಸೇರಿದಂತೆ ಉದ್ಯಮ ವಲಯ ಆಚ್ಚರಿ ವ್ಯಕ್ತಪಡಿಸಿ, ಇಂತಹ ಹೇಳಿಕೆ ಬೇಜವಾಬ್ದಾರಿತನದ್ದು, ಈ ಬಗ್ಗೆ ಸಚಿವರು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದವು.
ಮತ್ತಷ್ಟು
ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್
ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ
ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ದೆಹಲಿ ಸ್ಫೋಟದ ಉಗ್ರರಿಗೆ ದುಬೈ ನಂಟು
ಸ್ಫೋಟ:ಉಗ್ರ ಅತಿಫ್ ಖಾತೆಯಲ್ಲಿ 3ಕೋಟಿ !
ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ