ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಧುರೈ ಮೀನಾಕ್ಷಿ ಲಷ್ಕರ್ ಟಾರ್ಗೆಟ್ - ತ.ನಾ ಕಟ್ಟೆಚ್ಚರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುರೈ ಮೀನಾಕ್ಷಿ ಲಷ್ಕರ್ ಟಾರ್ಗೆಟ್ - ತ.ನಾ ಕಟ್ಟೆಚ್ಚರ
ದೆಹಲಿ ಸರಣಿ ಬಾಂಬ್ ಸ್ಫೋಟ ಘಟನೆ ಸಂಭವಿಸಿದ ಬೆನ್ನಲ್ಲೇ ಇದೀಗ ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಾಲಯವನ್ನು ಸ್ಫೋಟಿಸುವುದಾಗಿ ಲಷ್ಕರ್ ಎ ತೊಯ್ಬಾ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ಬುಧವಾರವಷ್ಟೇ ಮುಂಬೈ ಪೊಲೀಸರು ಸ್ಫೋಟದ ಪ್ರಕರಣದ ಪ್ರಮುಖ ರೂವಾರಿಗಳಾದ ಇಂಡಿಯನ್ ಮುಜಾಹಿದ್ದೀನ್‌ನ ಐವರನ್ನು ಬಂಧಿಸಿದ್ದು,ಇದರೊಂದಿಗೆ ದೇಶಾದ್ಯಂತ ಸಂಭವಿಸಿದ ಎಲ್ಲಾ ಸ್ಫೋಟ ಕೃತ್ಯಗಳ ಸಂಚುಕೋರರನ್ನು ಸೆರೆಹಿಡಿದಂತಾಗಿದೆ ಎಂಬುದಾಗಿ ಹೇಳಿದ್ದರು.

ಇದೀಗ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಗುಪ್ತ ಸಂದೇಶವೊಂದು ಬಂದಿದ್ದು,ಆ ಪ್ರಕಾರ ಪ್ರಸಿದ್ಧ ಮಧುರೈ ಮೀನಾಕ್ಷಿ ಸೇರಿದಂತೆ ಐತಿಹಾಸಿಕ ದೇವಾಲಯಗಳನ್ನು ಸ್ಫೋಟಿಸುವುದಾಗಿ ಲಷ್ಕರ್ ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿರುವುದಾಗಿ ಮುನ್ನಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕರುಣಾನಿಧಿಯವರು ಗುರುವಾರ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದು,ರಾಜ್ಯಾದ್ಯಂತ ಹೈ ಅಲರ್ಟ್‌ಗೆ ಆದೇಶಿಸಿದ್ದು,ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲು ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಮತ್ತಷ್ಟು
ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಮುಂಬೈ:ಇಂಡಿಯನ್ ಮುಜಾಹಿದ್ದೀನ್‌ನ 5 ಉಗ್ರರ ಸೆರೆ
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಭ್ರಷ್ಟಾಚಾರದಲ್ಲಿ ಭಾರತಕ್ಕೆ 85ನೆ ಸ್ಥಾನ !
ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್
ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್