ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಯ್ ‌ಬರೇಲಿ ಭೂಮಿ ವಾಪಸ್: ಮಾಯಾವತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಯ್ ‌ಬರೇಲಿ ಭೂಮಿ ವಾಪಸ್: ಮಾಯಾವತಿ
ಸೋನಿಯಾ-ಮಾಯಾ ಕದನ ಸುಖಾಂತ್ಯ
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿನ ರೈಲ್ವೆ ಕೋಚ್ ಬೋಗಿ ಕಾರ್ಖಾನೆ ಸ್ಥಾಪನೆಗೆ ನಿಗದಿಪಡಿಸಿದ್ದ ಹೆಚ್ಚುವರಿ ಭೂಮಿಯನ್ನು ವಾಪಸ್ ನೀಡಲು ಶನಿವಾರ ಮುಖ್ಯಮಂತ್ರಿ ಮಾಯಾವತಿ ಸರ್ಕಾರ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಕರಣ ಯು ಟರ್ನ್ ಪಡೆಯುವುದರೊಂದಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ನಡುವಿನ ಕದನ ಸುಖಾಂತ್ಯ ಕಂಡಂತಾಗಿದೆ.

ರಾಯ್ ಬರೇಲಿಯಲ್ಲಿನ ರೈಲ್ವೆ ಬೋಗಿ ಕಾರ್ಖಾನೆ ಸ್ಥಾಪನೆಗಾಗಿ 189.25 ಹೆಕ್ಟೇರ್ ಭೂಮಿಯನ್ನು 90 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಯಾವತಿ ಸರ್ಕಾರ ಸಮ್ಮತಿ ನೀಡಿದೆ.

ಕೆಲವೇ ದಿನದ ಹಿಂದಷ್ಟೇ ರಾಯ್ ಬರೇಲಿಯಲ್ಲಿನ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಯ 189ಹೆಕ್ಟೇರ್ ಭೂಮಿ ಮಂಜೂರಾತಿ ಆದೇಶವನ್ನು ವಾಪಸ್ ಪಡೆಯುವ ಮೂಲಕ ಮುಖ್ಯಮಂತ್ರಿ ಮಾಯಾವತಿ ಮತ್ತು ಸೋನಿಯಾ ನಡುವೆ ತೀವ್ರ ವಾಗ್ದಾಳಿ ನಡೆಯುವ ಮೂಲಕ ರಾಜಕೀಯ ಘರ್ಷಣೆಗೆ ಕಾರಣವಾಗಿತ್ತು.

ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ 940ಎಕರೆ ಭೂಮಿಯನ್ನು ರೈಲ್ವೆ ಬೋಗಿ ಕಾರ್ಖಾನೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಕೇಂದ್ರಕ್ಕೆ ಮತ್ತೆ ಹೆಚ್ಚುವರಿಯಾಗಿ 189.50 ಎಕರೆ ಭೂಮಿ ಅವಶ್ಯಕತೆಯಾದರು ಏಕೆ ಎಂದು ಮಾಯಾ ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ಆದರೆ ರಾಯ್ ಬರೇಲಿಯಲ್ಲಿ ಸೋನಿಯಾ ನಿಗದಿಪಡಿಸಿದ್ದ ಭೂಮಿ ಪೂಜೆಗೆ ತಡೆಯೊಡ್ಡಿರುವ ಹಿಂದೆ ಯಾವುದೇ ರಾಜಕೀಯ ಗಿಮಿಕ್ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭೂಮಿಯನ್ನು ವಾಪಸ್ ನೀಡುವ ಕುರಿತು ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಪತ್ರವನ್ನು ರವಾನಿಸಿರುವುದಾಗಿ ಮಾಯಾವತಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಂಗೆ ನಿದ್ದೆನೇ ಬರ್ತಾ ಇಲ್ಲ: ಕರುಣಾ
'ಚಂದ್ರಯಾನ': ಸೋಮವಾರದಿಂದ ಕೌಂಟ್‌ಡೌನ್
ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿಗೆ ಬೆಂಕಿ ಇಟ್ಟ!
ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಕೇಳುವಂತಿಲ್ಲ
ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಸೆರೆ
ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!