ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವೆಂಬುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಪುನರುಚ್ಚರಿಸಿದ್ದಾರೆ.

ತವಂಗ್ ಮೊನಾಸ್ಟ್ರಿಯಲ್ಲಿ ಬೌದ್ಧಮಹೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಅರುಣಾಚಲ ಪ್ರದೇಶಕ್ಕೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ನುಡಿದರು.

ಭೂಮಿಯ ಮೇಲಿನ ಯಾವುದೇ ಶಕ್ತಿಯು ಅರುಣಾಚಲ ಪ್ರದೇಶವನ್ನು ನಮ್ಮಿಂದ ಕಸಿಯಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಅಂಗ ಮತ್ತು ಹೀಗೇ ಮುಂದುವರಿಯಲಿದೆ ಎಂದು ಅವರು ನುಡಿದರು.

ಚೀನವು ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಮುಖರ್ಜಿ ಈ ಮಾತನ್ನು ಪುನರುಚ್ಚರಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ 'ಇದು ನಮ್ಮ ಸೂರ್ಯೋದಯದ ನಾಡು' ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋವಾ ಅತ್ಯಾಚಾರ: ದೂರು ವಾಪಸ್ ಪಡೆದ ತಾಯಿ
ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
ಒಬಾಮರೆಡೆಗೆ ಎಚ್ಚರಿಕೆಯ ಹೆಜ್ಜೆ: ಪ್ರಣಬ್
ಮೀರತ್‌ನಲ್ಲಿ ಸ್ಫೋಟ: ಐದು ಸಾವು
ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
ಮುಸ್ಲಿಂ ಬಹುಪತ್ನಿತ್ವ ನಿಯಂತ್ರಣಕ್ಕೆ ಕಾನೂನು ಪ್ರಸ್ತಾಪ