ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉ.ಪ್ರ ವಿವಿಐಪಿಯನ್ನು ಪ್ರಶ್ನಿಸಲಿರುವ ಎಟಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಪ್ರ ವಿವಿಐಪಿಯನ್ನು ಪ್ರಶ್ನಿಸಲಿರುವ ಎಟಿಎಸ್
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಓರ್ವ ಪ್ರಮುಖ ವ್ಯಕ್ತಿಯನ್ನು ಪ್ರಶ್ನಿಸಲು ನಾಸಿಕ್ ನ್ಯಾಯಾಲಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ಗೆ ಸೋಮವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಟಿಎಸ್ ತಂಡವು ಸದ್ಯವೇ ಉತ್ತರಭಾರತದತ್ತ ಪ್ರಯಾಣ ಬೆಳೆಸಲಿದೆ.

ಸಾಮಾನ್ಯ ಸನ್ನಿವೇಶಗಳಲ್ಲಿ ಇತರ ರಾಜ್ಯದ ವ್ಯಕ್ತಿಗಳನ್ನು ಪ್ರಶ್ನಿಸಲು ನ್ಯಾಯಾಲಯದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲವಾದರೂ, ತನಿಖಾ ಪ್ರಕ್ರಿಯೆಯಲ್ಲಿ ಯಾವುದೇ ಸಂಭಾವ್ಯ ಅಡೆತಡೆಗಳನ್ನು ನಿವಾರಿಸುವ ಹಿನ್ನೆಲೆಯಲ್ಲಿ ಎಟಿಎಸ್ ಈ ಕ್ರಮಕ್ಕೆ ಮುಂದಾಗಿರುವುದಾಗಿ ಎಟಿಎಸ್ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಈ ವಿವಿಐಪಿ 2003ರಲ್ಲಿ ಪುಣೆಯ ಸಿಂಹಗಡದಲ್ಲಿ ನಡೆಸಲಾಗಿದ್ದ ತರಬೇತಿ ಶಿಬಿರಗಳನ್ನು ಸಂಘಟಿಸಿದ್ದಾರೆ ಎಂದು ಶಂಕಿಸಲಾಗಿದೆ.

ಪೊಲೀಸ್ ವಶದಲ್ಲಿರುವ ಲೆಫ್ಟಿನೆಂಟ್ ಕರ್ನಲ್ ಅವರನ್ನು ನಾರ್ಕೋ ಅನಾಲಿಸ್ ಪರೀಕ್ಷೆಗೊಳಪಡಿಸಿರುವುದಾಗಿ ಎಟಿಎಸ್ ನ್ಯಾಯಾಲಯಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ ಈ ಅನುಮತಿ ಪಡೆದಿದೆ. ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಭಾನುವಾರ ಬೆಂಗಳೂರಿನಲ್ಲಿ ನಾರ್ಕೋ ಅನಾಲಿಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇನ್ಯಾವುದೇ ಸೇನೆಸಿಬ್ಬಂದಿಗಳ ತನಿಖೆಯಿಲ್ಲ
ಎಟಿಎಎಸ್ ಇನ್ನಷ್ಟು ಸೇನಾಸಿಬ್ಬಂದಿಗಳ ತನಿಖೆ ನಡೆಸಬೇಕಿದೆ ಎಂದು ಹೇಳುತ್ತಿದ್ದರೆ, ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಇನ್ಯಾವುದೇ ಸೇನಾ ಸಿಬ್ಬಂದಿಗಳ ತನಿಖೆ ಇಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಹುಲ್ ರಾಜ್ ಪ್ರಕರಣ ನ್ಯಾಯಾಂಗ ತನಿಖೆ ಇಲ್ಲ
ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
ಪ್ರಯಾಣದಲ್ಲಿದ್ದುದರಿಂದ ಒಬಾಮ ಕರೆ ಸ್ವೀಕರಿಸಿಲ್ಲ: ಪ್ರಧಾನಿ
'ಗಲ್ಲು ಶಿಕ್ಷೆ'ಯಿಂದ ಪಾರಾದ ನಾಯಿ ಮತ್ತೆ ಕೋರ್ಟಿಗೆ!
ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
ಗಬ್ಬದ ಹಸು ಕೊಂದವಗೆ 1ವರ್ಷ ಜೈಲು