ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿ ಶಾಸಕ ಯೋಗಿ ಆತ್ಮಹತ್ಯೆಗೆ ಶರಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಶಾಸಕ ಯೋಗಿ ಆತ್ಮಹತ್ಯೆಗೆ ಶರಣು
ರಾಜಿಂದರ್ ನಗರ ಕ್ಷೇತ್ರದ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪುರಾನ್ ಚಾಂದ್ ಯೋಗಿ ಭಾನುವಾರ ಬೆಳಿಗ್ಗೆ ಆತ್ಮಹತ್ಯೆ ಶರಣಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಪುರಿಯಲ್ಲಿ ತಮ್ಮ ನಿವಾಸದಲ್ಲಿ ಶಾಸಕ ಯೋಗಿ ಅವರು ನೇಣಿಗೆ ಶರಣಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಯೋಗಿ ಸಾವಿನಿಂದ ಬಿಜೆಪಿಗೆ ಆಘಾತಕಾರಿಯಾಗಿ ಪರಿಣಮಿಸಿದೆ.

ಹಾಲಿ ಶಾಸಕರಾಗಿರುವ ಯೋಗಿ ಅವರು ಪಟೇಲ್ ನಗರದಿಂದ ಕಾಂಗ್ರೆಸ್ ಸ್ಪರ್ಧಾಳು ರಮಾಕಾಂತ್ ಗೋಸ್ವಾಮಿ ವಿರುದ್ಧ ಹಣಾಹಣಿಯಲ್ಲಿದ್ದರು. ಇಬ್ಬರು ಪ್ರಬಲ ಸ್ಪರ್ಧಿಗಳಾಗಿದ್ದು, ಇದೀಗ ಯೋಗಿ ಆಕಸ್ಮಿಕ ಸಾವಿನಿಂದ ಬಿಜೆಪಿ ಕಂಗಾಲಾಗಿದೆ.

ಯೋಗಿ ಅವರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಯೋಗಿ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರವೇ ಲೋಕಸಭೆ ಚುನಾವಣೆ ಇಲ್ಲ: ಪ್ರಧಾನಿ
ನ.18ರ ತನಕ ಪುರೋಹಿತ್ ಪೊಲೀಸ್ ವಶಕ್ಕೆ
ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
ಲಕ್ನೋ ನ್ಯಾಯಾಲಯದ ಆವರಣದಲ್ಲಿ ಲಘು ಸ್ಫೋಟ
ಹಿಂಬದಿ ಸವಾರನಿಗೆ ವಿಮಾ ಪರಿಹಾರವಿಲ್ಲ: ಸು.ಕೋ
ಪಾಂಡೆ ವೈದ್ಯಕೀಯ ಪರೀಕ್ಷೆಗೆ ಕೋರ್ಟ್ ನಕಾರ