ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಾರಾಷ್ಟ್ರಕ್ಕೆ ಛಗನ್ ಭುಜದ 'ಬಲ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾರಾಷ್ಟ್ರಕ್ಕೆ ಛಗನ್ ಭುಜದ 'ಬಲ'
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಛಗನ್ ಬುಜ್‌ಬಲ್ ಆಯ್ಕೆಯಾಗಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಯೊಂದಿಗೆ ಅವರು ಗೃಹಖಾತೆಯನ್ನೂ ಹೊಂದಲಿದ್ದಾರೆ.

ಮುಂಬೈ ದಾಳಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಆರ್.ಆರ್.ಪಾಟೀಲ್ ಐದು ದಿನಗಳ ಹಿಂದೆ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.

ಬುಜ್‌ಬಲ್ ಅವರು ಪ್ರಸ್ತುತ ಲೋಕೋಪಯೋಗಿ ಸಚಿವರಾಗಿದ್ದಾರೆ. ಇವರೊಬ್ಬ ಕಠಿಣ ನಿಲುವಿನ ಸಚಿವ ಎಂದೇ ಖ್ಯಾತಿ ಹೊಂದಿದ್ದಾರೆ.

ಮುಂಬೈ ದಾಳಿಯ ಕುರಿತು "ದೊಡ್ಡ ದೇಶದಲ್ಲಿ ಇಂತಹ ಸಣ್ಣ ಘಟನೆಗಳು ನಡೆಯುತ್ತವೆ" ಎಂಬ ಅನುಚಿತ ಹೇಳಿಕೆ ನೀಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಎಲ್ಲೆಡೆಯಿಂದ ತೀವ್ರ ಟೀಕೆಗೆ ಒಳಗಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಲ್ಫಾ ಬಾಂಬ್ ತಜ್ಞ ಗುಂಡಿಗೆ ಬಲಿ
ಎಂ.ಅಣ್ಣಾದುರೈ, ಸಾನಿಯಾಗೆ ಗೌರವ ಡಾಕ್ಟರೇಟ್
ದೆಹಲಿ: ಗುಂಡಿನ ಸದ್ದು ಸೃಷ್ಟಿಸಿದ ಕೋಲಾಹಲ
ಭಾರತಕ್ಕೆ ಯುದ್ಧದ ಇರಾದೆಯಿಲ್ಲ: ಜರ್ಮನಿಗೆ ಎಂಕೆಎನ್
ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ