ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದಾಳಿ: ದೇಶದ ಕ್ಷಮೆಯಾಚಿಸಿದ ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ: ದೇಶದ ಕ್ಷಮೆಯಾಚಿಸಿದ ಪ್ರಧಾನಿ
ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗುರುವಾರ ದೇಶದ ಕ್ಷಮೆಯಾಚಿಸಿದ್ದಾರೆ.

ಅವರು ಗುರುವಾರ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ, ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ, ದೇಶ ಸೇರಿದಂತೆ ಜಾಗತಿಕವಾಗಿ ತಾಂಡವಾಡುತ್ತಿರುವ ಉಗ್ರರ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಆ ನಿಟ್ಟಿನಲ್ಲಿ ಭಯೋತ್ಪಾದಕರನ್ನು ಸದೆ ಬಡಿಯಲೇಬೇಕು ಎಂದು ಹೇಳಿದ ಪ್ರಧಾನಿ, ದೇಶದಲ್ಲಿ ಆಧುನಿಕ ಹಾಗೂ ಸಶಕ್ತವಾದ ಪೊಲೀಸ್ ಪಡೆಯ ಅಗತ್ಯವಿದೆ ಎಂದು ತಿಳಿಸಿದರು.

ಭಾರತ ಪ್ರತಿಯೊಂದು ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಭಯೋತ್ಪಾದನೆಯನ್ನು ಎದುರಿಸಲು ಪಕ್ಷಬೇಧ ಮರೆತು ಹೋರಾಡಬೇಕಾಗಿದೆ ಎಂದರು.

ಭಯೋತ್ಪಾದನೆ ಎದುರು ನಾವು ಸೋಲನ್ನಪ್ಪಿದ್ದೇವೆ, ಅದಕ್ಕೆ ಸಾಕಷ್ಟು ಬೆಲೆ ತೆರುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭಯೋತ್ಪಾದನೆ ದೇಶದ ದೊಡ್ಡ ಸವಾಲು ಆಗಿದ್ದು, ಅದನ್ನು ನಿಗ್ರಹಿಸಲು ಕೇಂದ್ರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ವಿರುದ್ಧ ಯುದ್ಧ ಪರಿಹಾರವಲ್ಲ: ಪ್ರಣಬ್
ರಾಜ್: ಗೆಹ್ಲೋಟ್-ಓಲಾ ಬೆಂಬಲಿಗರ ನಡುವೆ ಘರ್ಷಣೆ
ಯುದ್ಧವನ್ನು ಒಗ್ಗಟ್ಟಿನಿಂದ ಎದುರಿಸೋಣ: ಆಡ್ವಾಣಿ
ಡಿ.24ರ ತನಕ ಕಸಬ್‌ ಪೊಲೀಸ್ ವಶಕ್ಕೆ
ಲೋಕಸಭೆಯಲ್ಲಿ ಏಕತೆ ಘೋಷಿಸಿದ ವಿಪಕ್ಷ ನಾಯಕ
ಪಾಕ್ ವಿರುದ್ಧ ಪುರಾವೆ ಇದೆ: ಸಂಸತ್‌ನಲ್ಲಿ ಚಿದು