ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತದಿಂದ ಪಾಕ್ ಹೈಕಮಿಷನರ್‌ಗೆ ಪುರಾವೆ ಹಸ್ತಾಂತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಿಂದ ಪಾಕ್ ಹೈಕಮಿಷನರ್‌ಗೆ ಪುರಾವೆ ಹಸ್ತಾಂತರ
ನವದೆಹಲಿ: ಮುಂಬೈಯಲ್ಲಿ ಉಗ್ರರು ನವೆಂಬರ್ 26ರಂದು ನಡೆಸಿರುವ ನರಮೇಧದ ಕುರಿತು ಭಾರತವು ಪಾಕಿಸ್ತಾನಕ್ಕೆ ಪುರಾವೆಯನ್ನು ಒದಗಿಸಿರುವುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಪಾಕಿಸ್ತಾನದ ಹೈಕಮಿಷನರ್‌ಗೆ ಈ ಪುರಾವೆಗಳನ್ನು ಒದಗಿಸಿರುವುದಾಗಿ ಅವರು ನುಡಿದರು. ಅಲ್ಲದೆ ಈ ಸಾಕ್ಷ್ಯಾಧಾರಗಳನ್ನು ಭಾರತ ವಿಶ್ವಾದ್ಯಂತ ತನ್ನ ಇತರ ಸ್ನೇಹಿತ ರಾಷ್ಟ್ರಗಳಿಗೂ ರವಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಣಬ್ ಮುಖರ್ಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಪಾಕಿಸ್ತಾನ ಹೈಕಮಿಷನರ್ ಶಾಹಿದ್ ಮಲಿಕ್‌ರಿಗೆ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದ್ದಾರೆ.

ಪಾಕಿಸ್ತಾನವು ತನ್ನ ದ್ವಿಪಕ್ಷೀಯ ಬದ್ಧತೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

"ಪಾಕಿಸ್ತಾನಕ್ಕೂ ಉಗ್ರರಿಗೂ ಇರುವ ಸಂಪರ್ಕಗಳನ್ನು ನೀಡಲಾಗಿದೆ. ಪಾಕಿಸ್ತಾನವು ಇತರ ತನಿಖೆಗಳನ್ನು ಕೈಗೊಳ್ಳಬೇಕು" ಎಂದು ಭಾರತ ನಿರೀಕ್ಷಿಸುವುದಾಗಿ ಅವರು ನುಡಿದರು.

ಪುರಾವೆಗಳಲ್ಲಿ ಬಂಧಿತ ಉಗ್ರನ ತಪ್ಪೊಪ್ಪಿಗೆ, ಉಗ್ರರ ಸೆಟಲೈಟ್ ಫೋನ್ ಸಂಭಾಷಣೆ ಹಾಗೂ ಇತರ ದಾಖಲೆಗಳು ಸೇರಿವೆ ಎನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್‌ಫೋಸಿಸ್, ವಿಪ್ರೊಗೆ ಉಗ್ರರ ಬೆದರಿಕೆ
ಜಮ್ಮು: ಮುಂದುವರಿದ ಉಗ್ರರ ದಮನ ಕಾರ್ಯ
ಪ್ರಭಾಕರನ್ ಸಿಕ್ಕರೆ ಭಾರತಕ್ಕೆ ಹಸ್ತಾಂತರಿಸಿ: ಕಾಂಗ್ರೆಸ್
ಪಾಕ್ ಸಹಕಾರದೊಂದಿಗೆ ಮುಂಬೈ ದಾಳಿ: ಚಿದಂಬರಂ
ಪಾ(ತ)ಕಿಗಳ ಪುರಾವೆ ಒಪ್ಪಿಸಲು ಯುಎಸ್‌ಗೆ ಚಿದು
ಬಿಎಸ್ಪಿ ಶಾಸಕನ ವಿರುದ್ಧ ಆರೋಪಪಟ್ಟಿ