ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಭಯೋತ್ಪಾದನೆಯ ಪಿಡುಗಿನ ವಿರುದ್ಧ ಹೋರಾಡಲು ವಿವಿಧ ಹಂತದಲ್ಲಿ ಮಾತುಕತೆಗಳನ್ನು ಮುಕ್ತವಾಗಿಸಬೇಕು ಎಂದು ಮುಂಚೂಣಿಯ ಮುಸ್ಲಿಂ ವಿದ್ವಾಂಸರೊಬ್ಬರು ಭಾರತ ಸರ್ಕಾರವನ್ನು ಒತ್ತಾಯಸಿದ್ದಾರೆ.

"ಸಮಾಜದ ವಿವಿಧ ಸ್ತರಗಳಲ್ಲಿ ಮಾತುಕತೆಯ ಹಾದಿಯನ್ನು ಮುಕ್ತವಾಗಿಸಬೇಕು. ಭಯೋತ್ಪಾದನೆ ಸಮಸ್ಯೆಗೆ ಮಾತುಕತೆ ಮೂಲಕ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯ" ಎಂದು ಡಾ. ಮುಶಿರುಲ್ ಹಸನ್ ಅವರು ಹೇಳಿದ್ದಾರೆ. ಅವರು ರೋಟರಿ ಇಂಟರ್‌ನ್ಯಾಶನಲ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

"ನಮ್ಮ ಪೂರ್ವಜರಿಂದ ಬಂದಿರುವ ಮತ್ತು ಸಂವಿಧಾನವು ಒದಗಿಸಿರುವ ಮೌಲ್ಯಗಳನ್ನು ಕಾಪಾಡುವ ಮೂಲಕವೇ ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕಾಗಿದೆ" ಎಂದು ಅವರು ನುಡಿದರು.

ವಿವೇಚನಾ ರಹಿತ ಹಿಂಸಾಚಾರವು ನಮ್ಮನ್ನೇ ಧ್ವಂಸ ಮಾಡುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕಾಗಿ ನಾವೆಲ್ಲರೂ ಒಂದು ಸಮಾನತೆಯ ಸಮಾಜವನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಯಾವುದೇ ಕುಟುಂಬವು ಕಷ್ಟವನ್ನು ಎದುರಿಸುತ್ತದೆ. ನಮ್ಮ ರಾಷ್ಟ್ರವೂ ಸಮಸ್ಯೆಯನ್ನು ಎದುರಿಸಬಹುದು ಮತ್ತು ನಾವು ಬಹು ಸಂಪ್ರದಾಯದ ಮೇಲೆ ವಿಶ್ವಾಸವಿರಿಸಬೇಕು ಹಾಗೂ ಸಮಕಾಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಗರೂಕವಾಗಿರಬೇಕು" ಎಂದು ಅವರು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಎಂ ಸೊರೇನ್‌ಗಾಗಿ ಸ್ಥಾನ ತ್ಯಜಿಸಿದ ಬಿಜೆಪಿ ಶಾಸಕ
ಇಂದು ಗೋಲ್‌ಮಾಲ್ ರಾಜು ನ್ಯಾಯಾಲಯಕ್ಕೆ ಹಾಜರು
ಅಸ್ಸಾಂನಲ್ಲಿ ಮತ್ತೆ ಸ್ಫೋಟ-2 ಬಲಿ
ಸತ್ಯಂ ಬಿಗ್ ಬ್ಯಾಂಗ್- 2 ತಿಂಗಳ ಸಂಬಳ ಕಟ್
ಪಾಕ್‌ನೊಂದಿಗೆ ಉತ್ತಮ ಸಂಬಂಧ ಅಗತ್ಯವಿದೆ: ಒಮರ್
ಸತ್ಯಂ ಗೋಲ್‌ಮಾಲ್ ಸಿಐಡಿ ತನಿಖೆ: ಆಂಧ್ರ ಸಿಎಂ