ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪುರಾವೆಗಳಿಗೆ ಪಾಕಿನ್ನೂ ಉತ್ತರಿಸಿಲ್ಲ: ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುರಾವೆಗಳಿಗೆ ಪಾಕಿನ್ನೂ ಉತ್ತರಿಸಿಲ್ಲ: ಭಾರತ
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಶಕ್ತಿಗಳ ಕೈವಾಡವಿದೆ ಎಂಬುದಾಗಿ ನೀಡಿರುವ ಪುರಾವೆಗೆ ಪಾಕಿಸ್ತಾನದಿಂದ ಯಾವುದೇ ಅಧಿಕೃತ ಉತ್ತರ ಪಡೆದಿಲ್ಲ ಎಂದು ಭಾರತ ಶನಿವಾರ ಹೇಳಿದೆ.

"ನಾವು ಯಾವಾಗ ಉತ್ತರ ಪಡೆಯುತ್ತೇವೆಯೋ ಆವಾಗ ಅದಕ್ಕೆ ಪ್ರತಿಕ್ರಿಯಿಸುತ್ತೇವೆ. ನಾವಿನ್ನೂ ಉತ್ತರ ಪಡೆದಿಲ್ಲ" ಎಂದು ವಿದೇಶಾಂಗ ಇಲಾಖಾ ರಾಜ್ಯ ಸಚಿವ ಆನಂದ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿದ 'ಕೆಲವು ಮಾಹಿತಿ'ಗಳಿಗೆ ಐಎಸ್ಐ ತನ್ನ 'ಪ್ರತಿಕ್ರಿಯೆ' ನೀಡಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಶುಕ್ರವಾರ ಹೇಳಿದ್ದರು.

"ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳಿಗೆ ನೀಡಿರುವ ಭರವಸೆಯನ್ನು ಪಾಕಿಸ್ತಾನ ಉಳಿಸಿಕೊಳ್ಳಬೇಕು. ಅದು ತನ್ನ ಮಾತಿನಂತೆ ನಡೆದುಕೊಳ್ಳಬೇಕು. ಅದು ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ಮತ್ತು ಮೂಲ ಸೌಕರ್ಯಗಳನ್ನು ಧ್ವಂಸಗೊಳಿಸಬೇಕು ಎಂಬ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ದಾಳಿಯಲ್ಲಿ ಒಳಗೊಂಡಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ಹೆಸರನ್ನು ಗುರುತಿಸಲಾಗಿದೆ. ಅವರು ಭಾರತದ ಮೇಲೆ ದಾಳಿ ನಡೆಸಿರುವ ಕಾರಣ ಅವರನ್ನು ಭಾರತೀಯ ಕಾನೂನಿನಡಿಯಲ್ಲಿ ಶಿಕ್ಷಿಸಬೇಕಾಗಿದೆ ಎಂದು ಅವರು ನುಡಿದರು.

ಮುಂಬೈ ದಾಳಿಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವುದು ಮತ್ತು ಉಗ್ರರಿಗೆ ನೀಡಲಾಗಿರುವ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ ತಟಸ್ಥವಾಗಿಸುವುದು ಒಂದು ರಾಷ್ಟ್ರವಾಗಿರುವ ಪಾಕಿಸ್ತಾನದ ಭದ್ಧತೆಯಾಗಿದೆ ಎಂದು ಶರ್ಮಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಜಯ್ ದತ್‌ ಸ್ಫರ್ಧಿಸಲಾಗದಿದ್ದರೆ ಮಾನ್ಯಾತಾಗೆ ಎಸ್ಪಿ ಟಿಕೆಟ್
ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಸಿಎಂ ಸೊರೇನ್‌ಗಾಗಿ ಸ್ಥಾನ ತ್ಯಜಿಸಿದ ಬಿಜೆಪಿ ಶಾಸಕ
ಇಂದು ಗೋಲ್‌ಮಾಲ್ ರಾಜು ನ್ಯಾಯಾಲಯಕ್ಕೆ ಹಾಜರು
ಅಸ್ಸಾಂನಲ್ಲಿ ಮತ್ತೆ ಸ್ಫೋಟ-2 ಬಲಿ
ಸತ್ಯಂ ಬಿಗ್ ಬ್ಯಾಂಗ್- 2 ತಿಂಗಳ ಸಂಬಳ ಕಟ್