ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾಯಾಲಯಕ್ಕೆ ಸತ್ಯಂ ರಾಜು ಹಾಜರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಲಯಕ್ಕೆ ಸತ್ಯಂ ರಾಜು ಹಾಜರಿ
ಹಣಕಾಸು ಅವ್ಯವಹಾರದ ಹಿನ್ನೆಲೆಯಲ್ಲಿ ಪದತ್ಯಾಗಮಾಡಿರುವ ಸತ್ಯ ಕಂಪ್ಯೂಟರ್ಸ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ರಾಮಲಿಂಗಾ ರಾಜು ಹಾಗೂ ಅವರ ಸಹೋದರನನ್ನು ಶುಕ್ರವಾರ ಸಿಕಂದರಾಬಾದಿನಲ್ಲಿ ಮ್ಯಾಜೆಸ್ಟ್ರೀಟ್ ಎದುರುಗಡೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಸಿಕ್ಸ್ತ್ ಅಡಿಷನಲ್ ಚೀಫ್ ಜುಡಿಶಿಯಲ್ ಮ್ಯಾಜೆಸ್ಟ್ರೀಟ್ ರಾಮಕೃಷ್ಣ ಅವರ ನಿವಾಸದಲ್ಲಿ ಸಿಐಡಿ ಬಂಧನದಲ್ಲಿದ್ದ ರಾಜು ಸಹೋದರರನ್ನು ಹಾಜರು ಪಡಿಸಲಾಗಿದೆ.

ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದ ರಾಮಲಿಂಗಾ ರಾಜು ಅವರನ್ನು ಬಂಧಿಸಿರಾಜ್ಯ ಪೊಲೀಸ್ ಮುಖ್ಯಕಚೇರಿಯಲ್ಲಿ ಇರಿಸಲಾಗಿತ್ತು. ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಅವರ ತಪಾಸಣೆಗಾಗಿ ವೈದ್ಯರ ತಂಡವೂ ಅಲ್ಲಿ ನೆರೆದಿತ್ತು.

ರಾಜು ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಸೆಬಿ ಮನವಿ ಸಲ್ಲಿಸಿತ್ತು. ಹೆಚ್ಚಿನ ವಿಚಾರಣೆಗಾಗಿ ಸಹೋದರರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಸಿಬಿ-ಸಿಐಡಿ ನ್ಯಾಯಾಲಯವನ್ನು ವಿನಂತಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಗೆ ಆಶ್ರಯ ನೀಡಿದ ಇನ್ನೋರ್ವ ಮಹಿಳೆ ಬಂಧನ
ಪುರಾವೆಗಳಿಗೆ ಪಾಕಿನ್ನೂ ಉತ್ತರಿಸಿಲ್ಲ: ಭಾರತ
ಸಂಜಯ್ ದತ್‌ ಸ್ಫರ್ಧಿಸಲಾಗದಿದ್ದರೆ ಮಾನ್ಯಾತಾಗೆ ಎಸ್ಪಿ ಟಿಕೆಟ್
ಮಾತುಕತೆಯಿಂದ ಉಗ್ರವಾದ ನಿರ್ಮೂಲನೆ ಸಾಧ್ಯ: ಹಸನ್
ಸಿಎಂ ಸೊರೇನ್‌ಗಾಗಿ ಸ್ಥಾನ ತ್ಯಜಿಸಿದ ಬಿಜೆಪಿ ಶಾಸಕ
ಇಂದು ಗೋಲ್‌ಮಾಲ್ ರಾಜು ನ್ಯಾಯಾಲಯಕ್ಕೆ ಹಾಜರು