ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರ್ ಬಯಲುಗೊಳಿಸಿದ ಮಾಯಾ 'ಭ್ರಷ್ಟಾಚಾರ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರ್ ಬಯಲುಗೊಳಿಸಿದ ಮಾಯಾ 'ಭ್ರಷ್ಟಾಚಾರ'
ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಹುಟ್ಟುಹಬ್ಬಕ್ಕಾಗಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕರು ಕಾರ್ಯಕರ್ತರಿಗೆ ಹಣ ಸಂಗ್ರಹಿಸುವಂತೆ ಹೇಳಿರುವ ದೂರವಾಣಿ ಸಂಭಾಷಣೆಯನ್ನೊಳಗೊಂಡ ಸಿಡಿಯನ್ನು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಭಾನುವಾರ ಬಿಡುಗಡೆಗೊಳಿಸಿದ್ದಾರೆ.

"ಹಿರಿಯ ಬಿಎಸ್‌ಪಿ ನಾಯಕರಾದ ತಿಲಕ್ ಚಂದ್ ಅಹಿರ್ವಾಲ್ ಮತ್ತು ಸಿ.ಪಿ. ಸಿಂಗ್‌ರಿಂದ 20 ಲಕ್ಷ ರೂಪಾಯಿ ಪಡೆದು ಅದನ್ನು ದೆಹಲಿಯ ಬಿಎಸ್‌ಪಿ ಮುಖಂಡ ಸುರೇಶ್ ಚಂದ್‌ರಿಗೆ ಕೊಟ್ಟ ಮಾಹಿತಿಯೂ ಈ ಸಿಡಿಯಲ್ಲಿದೆ" ಎಂದು ಅಮರ್ ಸಿಂಗ್ ಪತ್ರಕರ್ತರಿಗೆ ತಿಳಿಸಿದರು.

ಈ ಹಣವನ್ನು ಪಕ್ಷದ 39 ಕಾರ್ಯಕರ್ತರಿಗೆ, ಸ್ಥಳೀಯ ನಾಯಕರಿಗೆ ಹಾಗೂ ದೆಹಲಿಯ ಕಾರ್ಪೋರೇಟರುಗಳಿಗೆ ಹಂಚಲಾಗಿದೆ. ಅಲ್ಲದೆ ಅದನ್ನು ಮಾಯಾವತಿಯವರ ಹೆಸರಿನ ಬ್ಯಾಂಕ್ ಡ್ರಾಫ್ಟ್ ಮ‌ೂಲಕ ಕಳುಹಿಸುವಂತೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.

ಹಿರಿಯ ಬಿಎಸ್‌ಪಿ ನಾಯಕರು ಪಕ್ಷದವರು ಹಣ ಸಂಗ್ರಹಿಸಿ ಮಾಯಾವತಿಯವರಿಗೆ ಕಳುಹಿಸಲು ಆದೇಶಿಸುವ ಮಾಹಿತಿಗಳು, ನಂಬರ್‌ಗಳನ್ನು ಹೊಂದಿದ ಸಂಪೂರ್ಣ ವಿವರಗಳೊಂದಿಗೆ ಬ್ಯಾಂಕ್ ಡ್ರಾಫ್ಟ್‌ಗಳು, ಬ್ಯಾಂಕಿನ ಹೆಸರು ಮುಂತಾದ ವಿವರ ಈ ಸಿಡಿಯಲ್ಲಿವೆ ಎಂದು ಸಿಂಗ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಮಾಯಾವತಿ ಮತ್ತು ಬಿಎಸ್‌ಪಿ ನಾಯಕರುಗಳು ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಸಿಂಗ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಈ ಸಂಬಂಧ ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಿದ್ದು, ಬಿಎಸ್‌ಪಿಯ ಮಾನ್ಯತೆಯನ್ನು ರದ್ದುಪಡಿಸಲು ಒತ್ತಾಯಿಸುವುದಾಗಿಯೂ ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾನ್ಯತಾಗೆ ದಿಗ್ವಿಜಯ್‌ ಸಿಂಗ್ ಅವಮಾನ: ಸಮಾಜವಾದಿ
ಅಪಹರಣಕಾರರಿಂದ ಏಳು ಭಾರತೀಯರ ಬಿಡುಗಡೆ
ಬ್ಲಾಗಂಗಳಕ್ಕಿಳಿದ ಆಡ್ವಾಣಿ: ಜಿನ್ನಾ ಹೇಳಿಕೆಗೆ ಸಮರ್ಥನೆ
ಕಾಂಗ್ರೆಸ್‍‌ನಲ್ಲಿ ಪ್ರಧಾನಿ ಪಟ್ಟ ಖಾಲಿಇಲ್ಲ
ದುರಾನಿ ವಜಾ ದುರದೃಷ್ಟಕರ: ಪ್ರಣಬ್
ನ್ಯಾಯಾಲಯಕ್ಕೆ ಸತ್ಯಂ ರಾಜು ಹಾಜರಿ