ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ರಾಮಲಿಂಗಾ ರಾಜು ಸೇರಿದಂತೆ ಸತ್ಯಂ ಕಂಪ್ಯೂಟರ್ಸ್‌ನ ಮಾಜಿ ಪ್ರಮುಖ ಪ್ರತಿನಿಧಿಗಳ ಜಾಮೀನು ಅರ್ಜಿಯನ್ನು ನಗರದ ನ್ಯಾಯಾಲಯ ಒಂದು ಜನವರಿ 16ರ ತನಕ ಮುಂದೂಡಿದೆ. ಅಂತೆಯೇ ರಾಜು ಅವರನ್ನು ಪ್ರಶ್ನಿಸಲು ಅನುಮತಿ ಕೋರಿ ಸೆಬಿ ಸಲ್ಲಿಸಿರುವ ಅರ್ಜಿಯನ್ನೂ ಮುಂದೂಡಲಾಗಿದೆ.

ಜನವರಿ 16ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ರಾಜು ಅವರ ವಕೀಲ ತಿಳಿಸಿದ್ದಾರೆ. ರಾಜು ಹಾಗೂ ಬಂಧಿತ ಇತರರ ಪರ ವಾದಕ್ಕಾಗಿ 25 ವಕೀಲರ ತಂಡವನ್ನು ಒಟ್ಟು ಮಾಡಲಾಗಿದೆ ಎಂದು ವಕೀಲ ಭರತ್ ಕುಮಾರ್ ಹೇಳಿದ್ದಾರೆ.

ರಾಮಲಿಂಗಾ ರಾಜು ಜತೆಗೆ ಅವರ ಸಹೋದರ ರಾಮ ರಾಜು ಹಾಗೂ ಸತ್ಯಂ ಸಿಎಫ್ಒ ವಾಡ್ಲಮಣಿ ಶ್ರೀನಿನಾಸ್ ಅವರೂ ಜನವರಿ 23ರ ತನಕ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ರಾಜು ಹಾಗೂ ಇತರರನ್ನು ಪ್ರಶ್ನಿಸಲು ಅನುಮತಿ ನೀಡಬೇಕು ಎಂಬುದಾಗಿ ಸೆಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತ್ಯರ್ಜಿ ಸಲ್ಲಿಸಲು ರಾಜು ವಕೀಲರು ಒಂದು ದಿನದ ಕಾಲಾವಕಾಶ ಕೇಳಿರುವ ಕಾರಣ ನ್ಯಾಯಾಲಯವು ಪ್ರಕರಣವನ್ನು ಜ.16ಕ್ಕೆ ಮುಂದೂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಸೊರೇನ್ ರಾಜೀನಾಮೆ
ಶ್ರೀಲಂಕಾ ತಮಿಳರನ್ನು ಎಲ್‌ಟಿಟಿಇಯೊಂದಿಗೆ ಸಮೀಕರಿಸಲಾಗದು
ಫೆಬ್ರವರಿಯಲ್ಲಿ 14ನೆ ಲೋಕಸಭೆಯ ಕೊನೆಯ ಅಧಿವೇಶನ
ಸ್ಲಂ ಡಾಗ್‌ಗೆ ಗೋಲ್ಡನ್ ಗ್ಲೋಬ್ ಗ್ಲೋರಿ
ಅಮರ್ ಬಯಲುಗೊಳಿಸಿದ ಮಾಯಾ 'ಭ್ರಷ್ಟಾಚಾರ'
ಮಾನ್ಯತಾಗೆ ದಿಗ್ವಿಜಯ್‌ ಸಿಂಗ್ ಅವಮಾನ: ಸಮಾಜವಾದಿ