ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬ್ಯಾಂಕ್ ಠೇವಣಿಗೆ ಕೈಹಾಕಬಾರದು ಎಂದಿದ್ದರು: ವಡ್ಲಮಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್ ಠೇವಣಿಗೆ ಕೈಹಾಕಬಾರದು ಎಂದಿದ್ದರು: ವಡ್ಲಮಣಿ
"ಬ್ಯಾಂಕ್ ಠೇವಣಿಗಳನ್ನೆಲ್ಲ ರಾಜು ಅವರೇ ನಿಭಾಯಿಸುತ್ತಿದ್ದು, ಈ ವಿಚಾರಕ್ಕೆ ಕೈ ಹಾಕಬಾರದು ಎಂದು ತನಗೆ ನಿರ್ದಿಷ್ಟವಾಗಿ ಹೇಳಲಾಗಿತ್ತು" ಎಂದು ಬಂಧನಕ್ಕೀಡಾಗಿರುವ ಸತ್ಯಂ ಕಂಪ್ಯೂಟರ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಹೇಳಿದ್ದಾರೆ.

ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, "ಕಂಪೆನಿಯ ಲೆಕ್ಕಪರಿಶೋಧಕರು ತಮ್ಮ ಚರ್ಚೆಯ ವೇಳೆ ಯಾವತ್ತೂ ಈ ಕೊರತೆಯ ಬಗ್ಗೆ ಚರ್ಚೆಯನ್ನು ನಡೆಸಿಲ್ಲ. ಈ ಕಾಲ್ಪನಿಕ ನಿರಖು ಠೇವಣಿಯನ್ನು ಮ್ಯಾನೇಜ್‌ಮೆಂಟ್ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಡುವಿನ ತಿಳುವಳಿಕೆಯೊಂದಿಗೆ ನಿಭಾಯಿಸಲಾಗಿತ್ತು" ಎಂದು ಆಪಾದಿಸಿದ್ದಾರೆ.

ಪ್ರೈಸ್‌ವಾಟರ್ ಕೂಪರ್ಸ್ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯ ಲೆಕ್ಕಪರಿಶೋಧನೆ ನಡೆಸುತ್ತದೆ.

ರಾಜು ಅವರೂ ತನ್ನ ಹೇಳಿಕೆಯಲ್ಲಿ, ತಾನು ಮತ್ತು ತನ್ನ ಸಹೋದರ ನಿರ್ಣಯಗಳನ್ನು ಕೈಗೊಂಡು ತಮ್ಮ ಸೂಚನೆಯಂತೆ ನಡೆದುಕೊಳ್ಳಲು ಹಣಕಾಸು ಅಧಿಕಾರಿಗೆ ಹೇಳಲಾಗಿತ್ತು ಮತ್ತು ಲೆಕ್ಕಪುಸ್ತಕಗಳನ್ನು ಕಳೆದ ಏಳು ವರ್ಷಗಳ ಕಾಲ ತಿರುಚಲಾಗಿದೆ ಎಂದು ಹೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
7 ವರ್ಷಗಳಿಂದ ಗೋಲ್‌ಮಾಲ್ ಮಾಡಿದ್ದೇವೆಂದ ರಾಜು
ಸತ್ಯಂ: ರಾಜುಗಿಂತಲೂ ಅಧಿಕ ವೇತನ ಮೈನಾಂಪತಿಗೆ
ಇಂಧನ ನೆಲೆಗಳ ರಕ್ಷಣೆಗೆ ಪ್ರಣಬ್ ಕರೆ
ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಸೊರೇನ್ ರಾಜೀನಾಮೆ
ಶ್ರೀಲಂಕಾ ತಮಿಳರನ್ನು ಎಲ್‌ಟಿಟಿಇಯೊಂದಿಗೆ ಸಮೀಕರಿಸಲಾಗದು