ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಗದ್ದುಗೆ ಆಕಾಂಕ್ಷಿಯಲ್ಲ: ಭೈರೋನ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಗದ್ದುಗೆ ಆಕಾಂಕ್ಷಿಯಲ್ಲ: ಭೈರೋನ್ ಸಿಂಗ್
ತಮ್ಮ ಆರೋಗ್ಯ ಸ್ಥಿರವಾಗಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ಭಾರತೀಯ ಜನತಾ ಪಕ್ಷದಲ್ಲಿ ತಲ್ಲಣ ಉಂಟು ಮಾಡಿದ್ದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು, ತಾವು ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಪ್ರಧಾನಿ ಪಟ್ಟದ ಪೈಪೋಟಿ ಅಭ್ಯರ್ಥಿ ಎಂದು ಯಾವತ್ತೂ ಹೇಳಿಲ್ಲ ಮತ್ತು ಇದು ಮಾಧ್ಯಮದ ಪ್ರಚಾರ ಎಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಕೋಟಾಗೆ ಭೇಟಿ ನೀಡಿದ ಶೇಖಾವತ್ ಅವರು, ಲೋಕಸಭೆಗೆ ಸ್ಪರ್ಧಿಸಲು ಜನರು ತಮ್ಮನ್ನು ಒತ್ತಾಯಿಸಿದ್ದರಿಂದ ನಾನು ಆ ಕುರಿತು ತೀರ್ಮಾನಿಸಿದ್ದೇನೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಆರೋಗ್ಯದ ಮೇಲೆ ಅವಲಂಬನೆಯಾಗಿದೆ ಎಂದು ತಿಳಿಸಿದರು.

ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೊಡುವಂತೆ ನಾನು ಯಾರನ್ನೂ ಸಹ ಸಂಪರ್ಕಿಸಿಲ್ಲ ಮತ್ತು ನಾನು ಯಾವ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂಬುದು ಜನರ ಬಯಕೆ ಮೇಲೆ ನಿರ್ಧಾರವಾಗಲಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಲವು ಬೇನಾಮಿ ಖಾತೆ ಹೊಂದಿದ್ದ ರಾಜು: ಐಟಿ
ಬ್ಯಾಂಕ್ ಠೇವಣಿಗೆ ಕೈಹಾಕಬಾರದು ಎಂದಿದ್ದರು: ವಡ್ಲಮಣಿ
7 ವರ್ಷಗಳಿಂದ ಗೋಲ್‌ಮಾಲ್ ಮಾಡಿದ್ದೇವೆಂದ ರಾಜು
ಸತ್ಯಂ: ರಾಜುಗಿಂತಲೂ ಅಧಿಕ ವೇತನ ಮೈನಾಂಪತಿಗೆ
ಇಂಧನ ನೆಲೆಗಳ ರಕ್ಷಣೆಗೆ ಪ್ರಣಬ್ ಕರೆ
ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ