ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರತಿ ತಿಂಗಳು 20 ಕೋಟಿ ಲಪಟಾಯಿಸುತ್ತಿದ್ದ (ಅ)ಸತ್ಯಂ ರಾಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿ ತಿಂಗಳು 20 ಕೋಟಿ ಲಪಟಾಯಿಸುತ್ತಿದ್ದ (ಅ)ಸತ್ಯಂ ರಾಜು
ಸತ್ಯಂ ಹಗರಣದ ಪ್ರಮುಖ ಆರೋಪಿಗಳ ಪೊಲೀಸ್ ಬಂಧನವನ್ನು ನಾಳೆಗೆ ವಿಸ್ತರಿಸಲಾಗಿದೆ.

ಹೈದರಾಬಾದಿನ ನ್ಯಾಯಾಲಯದ ವಿಚಾರಣೆ ವೇಳೆಗೆ, ಸತ್ಯಂ ರಾಜು ಕನಿಷ್ಠ ಹತ್ತುಸಾವಿರ ನಕಲಿ ವೇತನ ಖಾತೆಗಳನ್ನು ಸೃಷ್ಟಿಸಿದ್ದರು ಎಂಬುದಾಗಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕಂಪೆನಿಯಲ್ಲಿ ನಿಜವಾಗಿಯೂ ಇರುವುದು ಒಟ್ಟು 40 ಸಾವಿರ ಸಿಬ್ಬಂದಿಗಳೇ ವಿನಹ 53 ಸಾವಿರ ಸಿಬ್ಬಂದಿಗಳಲ್ಲ. ಹಾಗೂ 3 ಸಾವಿರ ಸಿಬ್ಬಂದಿಗಳು ಇತರ ವರ್ಗದಲ್ಲಿ ಬರುತ್ತಾರೆ ಎಂದು ಸರಕಾರಿ ಅಭಿಯೋಜಕರು ಹೇಳಿದ್ದಾರೆ.

ರಾಜು ಹಾಗೂ ಸಂಸ್ಥೆಯ ಮಾಜಿ ಹಣಕಾಸು ಅಧಿಕಾರಿ ಈ ಅಸ್ತಿತ್ವದಲ್ಲಿಲ್ಲದ ಸಿಬ್ಬಂದಿಗಳ ಸಂಬಳವನ್ನು ಬ್ಯಾಂಕಿನಿಂದ ಪಡೆಯುತ್ತಿದ್ದುದಾಗಿ ತನಿಖೆಯ ವೇಳೆಗೆ ಒಪ್ಪಿಕೊಂಡಿದ್ದಾರೆ.

ಅಲ್ಲದೆ ಪ್ರತಿ ತಿಂಗಳು ರಾಜು 20 ಕೋಟಿ ರೂಪಾಯಿಯನ್ನು ಸತ್ಯಂನಿಂದ ಲಪಟಾಯಿಸುತ್ತಿದ್ದರು. ಅತ್ಯಧಿಕ ಮೌಲ್ಯದ ಸಾವಿರಾರು ಎಕರೆಯ ಸುಮಾರು 400ಕ್ಕೂ ಅಧಿಕ ಬೇನಾಮಿ ಭೂ ವರ್ಗಾವಣೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ನ್ಯಾಯಲಯಕ್ಕೆ ತಿಳಿಸಲಾಗಿದೆ.

ತಿಂಗಳೊಂದರ 20 ಕೋಟಿಯಂತೆ ರಾಜು ಹಲವು ವರ್ಷಗಳ ಕಾಲ ದೋಚಿದ್ದು ಸುಮಾರು 1,250 ಕೋಟಿ ರೂಪಾಯಿಗಳನ್ನು ಗುಳುಂ ಮಾಡಿರುವುದಾಗಿ ಸರಕಾರಿ ವಕೀಲರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಪಿಎಯಲ್ಲಿ ಒಡಕು: ಪವಾರ್ ಪಿಎಂ ಆಗಲೆನ್ನುವ ಎನ್‌ಸಿಪಿ
'ಹಿಂದೂ ರಾಷ್ಟ್ರ' ಮಾಲೆಗಾಂವ್ ರೂವಾರಿಗಳ ಉದ್ದೇಶ
ಬಂಡಾಯಕ್ಕೆ ಆಸ್ಪದ ನೀಡಬಾರದು: 'ಮರಿಗಾಂಧಿ'
ಆ ರಕ್ತಸಿಕ್ತ ರಾತ್ರಿಯಂದು ಎಲ್ಲಿದ್ದರು ಈ ಉನ್ನತರು?
6,000 ಖೊಟ್ಟಿ ವೇತನ ಖಾತೆ ತೆರೆದಿದ್ದ ವಂಚಕ ರಾಜು?
ಮಿಲಿಬಂದ್ ಹೇಳಿಕೆ: ಪ್ರಧಾನಿ ಪತ್ರ ಬರೆದಿಲ್ಲ