ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಸ್ಪಿ-ಕಾಂಗ್ರೆಸ್‌ ಮೈತ್ರಿಗೆ ಕಲ್ಯಾಣ್‌ಸಿಂಗ್ ತೊಡಕು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಪಿ-ಕಾಂಗ್ರೆಸ್‌ ಮೈತ್ರಿಗೆ ಕಲ್ಯಾಣ್‌ಸಿಂಗ್ ತೊಡಕು?
ಬಿಜೆಪಿಗೆ ಟಾಟಾ ಹೇಳಿ ಸಮಾಜವಾದಿ ಪಕ್ಷ(ಎಸ್ಪಿ)ವನ್ನು ಅಪ್ಪಿಕೊಂಡಿರುವ ಕಲ್ಯಾಣ್ ಸಿಂಗ್‌ಗೆ ಪಕ್ಷದಲ್ಲಿ ಸಿಗುತ್ತಿರುವ ಪ್ರಾಧಾನ್ಯತೆಯು ಇದೀಗಾಗಲೆ ದುರ್ಬಲಗೊಳ್ಳುತ್ತಿರುವ ಎಸ್ಪಿ-ಕಾಂಗ್ರೆಸ್ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಧಾನ ವಿಭಾಗವೊಂದು ಈ ಕುರಿತು ಮರುನೋಟ ಹರಿಸುವಂತೆ ಕರೆ ನೀಡುವಂತೆ ಒತ್ತಾಯಿಸುತ್ತಿದೆ ಎನ್ನಲಾಗಿದೆ.

ಬಾಬರ್ ಮಸೀದಿ ಧ್ವಂಸಗೊಳಿಸಿದ ವೇಳೆ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಇದರಿಂದಾಗಿ ಮುಸ್ಲಿಂ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕಾಂಗ್ರೆಸ್ ಚಿಂತೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಎಸ್ಪಿ ಪ್ರಯತ್ನಿಸುತ್ತಿರುವಾಗಲೇ ಕಲ್ಯಾಣ್ ಸಿಂಗ್ ಒಂದು ಹೊಸತೊಡಕಾಗಿ ಪರಿಣಮಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೀಕೆ ಸುಲಭ, ನಿರ್ಧಾರ ಬಲು ಕಷ್ಟ: ಕಾಂಧಾರ್ ಘಟನೆಗೆ ಚಿದು
ಪಾಟ್ನ: ಎಲ್ಲೆಂದರಲ್ಲಿ ಕಸಚೆಲ್ಲಿದರೆ 500ರೂ ಕಕ್ಕಿ
ಪ್ರತಿ ತಿಂಗಳು 20 ಕೋಟಿ ಲಪಟಾಯಿಸುತ್ತಿದ್ದ (ಅ)ಸತ್ಯಂ ರಾಜು
ಯುಪಿಎಯಲ್ಲಿ ಒಡಕು: ಪವಾರ್ ಪಿಎಂ ಆಗಲೆನ್ನುವ ಎನ್‌ಸಿಪಿ
'ಹಿಂದೂ ರಾಷ್ಟ್ರ' ಮಾಲೆಗಾಂವ್ ರೂವಾರಿಗಳ ಉದ್ದೇಶ
ಬಂಡಾಯಕ್ಕೆ ಆಸ್ಪದ ನೀಡಬಾರದು: 'ಮರಿಗಾಂಧಿ'