ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರವಾದದ ವಿರುದ್ಧ ಶೂನ್ಯಸಹನೆಗೆ ಮೋದಿ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರವಾದದ ವಿರುದ್ಧ ಶೂನ್ಯಸಹನೆಗೆ ಮೋದಿ ಕರೆ
PTI
ಉಗ್ರವಾದದ ವಿರುದ್ಧ ಶೂನ್ಯಸಹನೆಗೆ ಗುಜಾರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

"ಉಗ್ರವಾದದ ವಿರುದ್ಧ ವಿವಿಧ ರೀತಿಯ ಹೋರಾಟವಿರಬಹುದು. ಆದರೆ ಉಗ್ರವಾದ ವಿರೋಧಿ ಕಾನೂನುಗಳ ಒಂದೇ ಆಗಿರಬೇಕು" ಎಂದು ಮೋದಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ನುಡಿದರು.

ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸಕೂಡದು ಮತ್ತು ಮಾನವ ಹಕ್ಕುಗಳ ಅತಿಯಾದ ಕಾಳಜಿಗಳನ್ನು ನಿರ್ಲಕ್ಷಿಸಬೇಕು ಎಂದು ನುಡಿದ ಗುಜರಾತ್ ಮುಖ್ಯಮಂತ್ರಿ, ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಎಬಿವಿಪಿ ಹಮ್ಮಿಕೊಂಡಿರುವ ಚಳುವಳಿಯನ್ನು ಅಭಿನಂದಿಸಿದರು.

ಈ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿಲ್ಲ ಎಂದು ಖೇದ ವ್ಯಕ್ತಡಿಸಿದ ಅವರು ಇಡಿಯ ರಾಷ್ಟ್ರವು ಇಂತಹ ಅಕ್ರಮ ನುಸುಳುವಿಕೆಯ ಅಪಾಯದ ಕುರಿತು ಎಚ್ಚೆತ್ತುಕೊಳ್ಳುವ ತನಕ ಎಬಿವಿಪಿಯು ತನ್ನ ಹೋರಾಟವನ್ನು ನಿಲ್ಲಿಸಬಾರದು ಎಂದು ಸಲಹೆ ನೀಡಿದರು.

ಆರ್ಥಿಕ ಹಿಂಜರಿತವಿದ್ದರೂ ಗುಜರಾತ್, 12 ಲಕ್ಷ ಕೋಟಿಯ ಹೂಡಿಕೆಯನ್ನು ಕಂಡಿದೆ. ಮತ್ತು 25 ಲಕ್ಷ ಯುವಕರು ಉದ್ಯೋಗಾವಕಾಶವನ್ನು ಕಂಡುಕೊಳ್ಳಲಿದ್ದಾರೆ ಎಂದು ಅವರು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈಗೆ ಎನ್‌ಎಸ್‌ಜಿ ಘಟಕ
ಉಗ್ರರು ಪೊಲೀಸ್ ವಶಕ್ಕೆ
ಬೀದಿನಾಯಿ ಹತ್ಯೆ ಆದೇಶಕ್ಕೆ ಸು.ಕೋ ತಡೆ
ರಾಷ್ಟ್ರದೊಳಗಿನ ಇಸ್ಲಾಮಿಕ್ ವ್ರಣವನ್ನು ಕತ್ತರಿಸಿ ಬಿಸಾಡಿ: ಠಾಕ್ರೆ
ಸಿನಿಮಾದಲ್ಲಿ ಧೂಮಪಾನ ಓ.ಕೆ: ದೆಹಲಿ ಹೈ.ಕೋ
ಶಾಂತಿಗಾಗಿ ಒಂದಾದ ಸರ್ವಧರ್ಮ ಕಲಾವಿದರು