ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಷ್ಕರೆ ಉಗ್ರರಿಗೆ ಸಹಾಯ: ಸಿಖ್ ಯುವಕನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಷ್ಕರೆ ಉಗ್ರರಿಗೆ ಸಹಾಯ: ಸಿಖ್ ಯುವಕನ ಬಂಧನ
ಪಾಕಿಸ್ತಾನ ಮೂಲದ ಲಷ್ಕರೆ-ಇ-ತೋಯ್ಬಾ ಸಂಘಟನೆಯ ಕಾರ್ಯಕರ್ತರಿಗೆ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ಅವಕಾಶ ನೀಡಿದ್ದಾನೆಂಬ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಸಿಖ್ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ಈ ಸಹಾಯಕ್ಕೆ ಪ್ರತಿಯಾಗಿ ಉಗ್ರರಿಂದ ಮದ್ಯವನ್ನು ಪಡೆಯುತ್ತಿದ್ದೆನೆನ್ನಲಾಗಿದೆ.

ರಾಜ್ಯ ಆರೋಗ್ಯ ಸೇವೆಯಲ್ಲಿ ಎಕ್ಸ್-ರೇ ಟೆಕ್ನೀಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಪೀಂದರ್ ಸಿಂಗ್ ಎಂಬಾತನನ್ನು ಆತನ ಚೌದಾಲ್ ಎಂಬಲ್ಲಿರುವ ನಿವಾಸದಿಂದ ಬಂಧಿಸಲಾಗಿದೆ. ಬಂಧಿತ ಉಗ್ರನೊಬ್ಬ ತನಿಖೆಯ ವೇಳೆಗೆ ತಿಳಿಸಿರುವ ಮಾಹಿತಿಯಾಧಾರದಲ್ಲಿ ಸಿಂಗ್ ಬಂಧನಕ್ಕೀಡಾಗಿದ್ದಾನೆ.

ಹಂದ್ವಾರ ಜಿಲ್ಲೆಯಲ್ಲಿ ಬಾಂಬ್ ಎಸೆದಿರುವ ಪ್ರಕಣರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಅಸ್ಲಂ ಎಂಬಾತನ ವಿಚಾರಣೆ ವೇಳೆಗೆ ಸಿಂಗ್ ಮನೆಯಲ್ಲಿ ಶಸ್ತ್ರಾಸ್ತ್ರ ಇರಿಸಲು ಅನುಕೂಲ ನೀಡಲಾಗಿತ್ತು ಎಂದು ತಿಳಿದು ಬಂದಿದೆ ಪೊಲೀಸರು ತಿಳಿಸಿದ್ದಾರೆ.

ಎರಡು ಕೈಬಾಂಬುಗಳು ಹಾಗೂ ಒಂದು ಪಿಸ್ತೂಲನ್ನು ಆತನ ನಿನಾಸದಿಂದ ವಶಪಡಿಸಲಾಗಿದೆ. ಲಷ್ಕರೆ ಉಗ್ರರು ಸಿಂಗ್ ನೀಡಿರುವ ಸಹಕಾರಕ್ಕೆ ಪ್ರತಿಯಾಗಿ ಒಂದಿಷ್ಟು ಹಣ ಮತ್ತು ಕೆಲವು ಬಾಟಲಿ ಮದ್ಯವನ್ನು ನೀಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಂಚ ಬೇಡಿಕೆಯಲ್ಲಿ ಪೊಲೀಸರು ಮುಂದು: ಸಮೀಕ್ಷೆ
ಪ್ರಧಾನಿ ಸಿಂಗ್ ಬೈಪಾಸ್ ಸರ್ಜರಿ ಪ್ರಗತಿಯಲ್ಲಿ
ಮುಂಬೈದಾಳಿಗೂ ಕಾಶ್ಮೀರಕ್ಕೂ ತಳುಕು ಬೇಡ: ಪ್ರಣಬ್
ಉಗ್ರವಾದದ ವಿರುದ್ಧ ಶೂನ್ಯಸಹನೆಗೆ ಮೋದಿ ಕರೆ
ಮುಂಬೈಗೆ ಎನ್‌ಎಸ್‌ಜಿ ಘಟಕ
ಉಗ್ರರು ಪೊಲೀಸ್ ವಶಕ್ಕೆ