ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಲಾಯಂ ಪ್ರಕರಣ: ಸಿಬಿಐಗೆ ಸುಪ್ರೀಂಕೋರ್ಟ್ ಮಂಗಳಾರತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಲಾಯಂ ಪ್ರಕರಣ: ಸಿಬಿಐಗೆ ಸುಪ್ರೀಂಕೋರ್ಟ್ ಮಂಗಳಾರತಿ
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಕುಟುಂಬದ ವಿರುದ್ಧ ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತು ಇರುವ ಬಗ್ಗೆ ಆರೋಪ ಹೊರಿಸಿದ್ದ ಸಿಬಿಐ ಇದೀಗ ಈ ಮೊದಲಿನ ನಿರ್ಧಾರವನ್ನು ಹಿಂಪಡೆಯುವ ಬಗ್ಗೆ ಕೋರಿದ್ದ ಸಿಬಿಐಗೆ ಮಂಗಳವಾರ ಸುಪ್ರೀಂಕೋರ್ಟ್ ಮಂಗಳಾರತಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಲಹೆಯನ್ನು ಕೇಳಿರುವ ಬಗ್ಗೆ ಸಿಬಿಐಯ ವಕೀಲರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ನ್ಯಾಯಪೀಠ, ಯಾವಾಗಿನಿಂದ ತಾವು ಕೇಂದ್ರ ಸರ್ಕಾರದ ಸಲಹೆ ಪಡೆಯಲು ಆರಂಭಿಸಿದ್ದೀರಿ? ನ್ಯಾಯಾಲಯದ ಸ್ಪಷ್ಟೀಕರಣವನ್ನು ಯಾಕೆ ನೀವು ಕೇಳುವುದಿಲ್ಲ ?ಎಂದು ಕಿಡಿಕಾರಿದೆ.

2007ರ ಮಾರ್ಚ್ 1ರಂದು ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧದ ಅಕ್ರಮ ಸಂಪತ್ತು ಆರೋಪದ ತನಿಖೆ ಮಾಡುವಂತೆ ಸಿಬಿಐಗೆ ಆದೇಶ ನೀಡಿತ್ತು.

ಮುಲಾಯಂ ಅಕ್ರಮ ಸಂಪತ್ತು ಪ್ರಕರಣದ ಬಗ್ಗೆ ಸಿಬಿಐನ ಡಿಐಜಿ ತಿಲೋತ್ತಮ ವರ್ಮ ಅವರು ಕಳೆದ ಫೆ.2ರಂದು 17ಪುಟಗಳ ಪುನರ್ ಪರಿಶೀಲನಾ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು.

2007ರ ಅಕ್ಟೋಬರ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಲಾಯಂ ಹಾಗೂ ಅವರ ಕುಟುಂಬದವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ತಾವು ನಂಬಿದ್ದಾಗಿ ಸಿಬಿಐ ವರದಿಯಲ್ಲಿ ತಿಳಿಸಿದೆ. ಅರ್ಜಿಯಲ್ಲಿ ಯಾವ ಅಂಶವೂ ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಮುಲಾಯಂ ಅವರಿಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಎಸ್‌ಐನಿಂದ ಕಸಬ್ ಹತ್ಯೆಗೆ ದಾವೂದ್‌ಗೆ ಸುಪಾರಿ !
ಅಕ್ರಮ ಸಂಪತ್ತು: ಮುಲಾಯಂಗೆ ಕ್ಲೀನ್ ಚಿಟ್ ?
ಹೊಸ ವೀಡಿಯೋ: ಭಾರತಕ್ಕೆ ಅಲ್ ಖಾಯಿದಾ ಬೆದರಿಕೆ
ವಾಜಪೇಯಿ ಆರೋಗ್ಯದಲ್ಲಿ ಸುಧಾರಣೆ
ರಾಮಸೇನೆ ಮೇಲೆ ಹದ್ದಿನ ಕಣ್ಣು: ಚಿದಂಬರಂ
ಬಿಹಾರ: ನಕ್ಸಲ್ ದಾಳಿಗೆ 10 ಪೊಲೀಸ್ ಬಲಿ